Advertisement

ಭೀಮಾ ತೀರದ ಗುಂಡಿನ‌ ದಾಳಿ ಪ್ರಕರಣ: ಭೈರಗೊಂಡ ಕಾರು ಚಾಲಕ ಸಾವು

04:43 PM Nov 03, 2020 | keerthan |

ವಿಜಯಪುರ: ಭೀಮಾ ತೀರದ ಮಹಾದೇವ ಭೈರಗೊಂಡ ಮೇಲಿನ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಚಾಲಕ ಲಕ್ಷ್ಮಣ ದಿಂಡೋರೆ (27) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

Advertisement

ಸೋಮವಾರ ಮಧ್ಯಾಹ್ನ ಮಹಾದೇವ ಭೈರಗೊಂಡ ಸ್ವಗ್ರಾಮ ಕೆರೂರ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಆಗಂತುಕ ಹಂತಕರು ಕನ್ನಾಳ ಕ್ರಾಸ್ ಬಳಿ ಟಿಪ್ಪರ್ ಮೂಲಕ ಭೈರಗೊಂಡ ಕಾರಿಗೆ ಅಪಘಾತ ಮಾಡಿ, ಬಳಿಕ‌ ಗುಂಡಿನ ದಾಳಿ ನಡೆಸಿದ್ದರು.

ಘಟನೆಯಲ್ಲಿ ಭೈರಗೊಂಡ ಆಪ್ತ 64 ವರ್ಷದ ಬಾಬುರಾಂ ಗುಂಡಿನ ದಾಳಿಯಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ. ಗಾಯಗೊಂಡಿದ್ದ ಕಾರು ಚಾಲಕ 27 ವರ್ಷದ ಲಕ್ಷ್ಮಣ ದಿಂಡೂರೆ ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇದರೊಂದಿಗೆ ಕನ್ನಾಳ ಕ್ರಾಸ್ ಗುಂಡಿನ ದಾಳಿ ಪ್ರಕರಣದಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದೆ.

ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಭೈರಗೊಂಡ ದೇಹದಿಂದ ಎರಡು ಗುಂಡುಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭೈರಗೊಂಡ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next