Advertisement

ಮಹಾದೇವ ಭೈರಗೊಂಡ ಶೂಟ್ ಔಟ್ ಪ್ರಕರಣ :ಮತ್ತೆ ಇಬ್ಬರ ಬಂಧನ

05:20 PM Nov 17, 2020 | Suhan S |

ವಿಜಯಪುರ : ಮಹಾದೇವ ಭೈರಗೊಂಡ ಹಾಗೂ ಸಂಗಡಿಗರ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತರನ್ನು ವಿಜಯಪುರ ನಗರದ ಬಂಬಳ ಅಗಸಿ ನಿವಾಸಿಗಳಾದ 26 ವರ್ಷದ ಮಹೇಶ ಅರ್ಜುನ ಸಾಳುಂಕೆ  ಹಾಗೂ ವಜ್ರಹನುಮಾನ‌ ಪ್ರದೇಶದ ನಿವಾಸಿ 23 ವರ್ಷದ ಬಾಬು ನಿಂಗನಗೌಡ ಬಿರಾದಾರ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮೊಬೈಲ್, ಒಂದು ಆಟೋ ಹಾಗೂ ಒಂದು ತಲವಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.

ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ರಚನೆಯಾಗಿರುವ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದ ತನಿಖಾ ತಂಡದ ಕಾರ್ಯಕ್ಕೆ ಎಸ್ಪಿ ಅನುಪಮ ಅಗರವಾಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನವೆಂಬರ್ 2 ರಂದು ವಿಜಯಪುರ ನಗರದ ಹೊರ ವಲಯದಲ್ಲಿ  ಮಹಾದೇವ ಭೈರಗೊಂಡ ಹಾಗೂ ಸಂಗಡಿಗರ ಮೇಲೆ ನಡೆದಿದ್ದ ಗುಂಡಿನ ದಾಳಿಯಲ್ಲಿ ಭೈರಗೊಂಡನ ಮ್ಯಾನೇಜರ್‌ ಬಾಬುರಾಮ್‌ ಮಾರುತಿ ಕಂಚನಾಳ (64) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಲಾಯಿಸುತ್ತಿದ್ದ ಲಕ್ಷ್ಮಣ ಖೋಗಾಂವನ ಕೂಡಾ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next