Advertisement

ಮಹದಾಯಿ ಹೋರಾಟಕ್ಕೆ 1800 ದಿನ

12:39 PM Jun 20, 2020 | Suhan S |

ನರಗುಂದ: ಜೀವ ಜಲಕ್ಕಾಗಿ ರೈತರ ಕೂಗು ಮುಂದುವರಿದಿದ್ದು, ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟ ಇಂದಿಗೆ ಸುದೀರ್ಘ‌ 1800 ದಿನಗಳನ್ನು ಪೂರೈಸಿದೆ.

Advertisement

ಕುಡಿಯುವ ನೀರಿಗಾಗಿ ಐದನೇ ವರ್ಷದ ಅಂತ್ಯಕ್ಕೆ ಸಾಗಿ ಬಂದಿರುವ ಮಹದಾಯಿ ಹೋರಾಟ ಇಂದು ಶುಕ್ರವಾರ 1800ನೇ ದಿನದ ನಿರಂತರ ಸತ್ಯಾಗ್ರಹ ಕಂಡಿದೆ. ಅಲ್ಲದೇ ಮಿಂಚಿ ಮರೆಯಾದ ವರುಣನಿಗಾಗಿ ಇಂದು ಮಹದಾಯಿ ಹೋರಾಟಗಾರರು ಹೋರಾಟ ವೇದಿಕೆ ಮುಂಭಾಗದಲ್ಲಿರುವ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿಸಿ, ಅಂಬಲಿ ಪ್ರಸಾದ ವಿತರಿಸಲಾಯಿತು.

ರೈತರ ಆಗ್ರಹ: ಮಹದಾಯಿ ಹೋರಾಟ ಐದನೇ ವರ್ಷದ ಅಂಚಿಗೆ ಬಂದಿದೆ. ಕೂಡಲೇ ಮಹದಾಯಿ ನೀರು ಮಲಪ್ರಭೆಗೆ ಜೋಡಿಸುವ ಕಾಮಗಾರಿ ಪ್ರಾರಂಭಿಸಲು ರಾಜ್ಯ ಸರ್ಕಾರ ಟೆಂಡರ್‌ ಕರೆದು ಕೆಲಸ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಹೋರಾಟಗಾರರು ಬೀದಿಗಿಳಿದು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಸರ್ಕಾರ ಕೂಡಲೇ ರೈತರಿಗೆ ಫಸಲ್‌ ಭೀಮಾ ಯೋಜನೆ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಎಲ್ಲ ಮಹದಾಯಿ ಹೋರಾಟಗಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next