Advertisement

ಧೃತರಾಷ್ಟ್ರನಿಂದ ಶಕುನಿವರೆಗೆ

08:05 AM Oct 31, 2018 | Karthik A |

ಹೊಸದಿಲ್ಲಿ: ‘ಧೃತರಾಷ್ಟ್ರನಿಂದ ದುರ್ಯೋಧನನವರೆಗೆ, ಮಹಾಭಾರತದ ಪ್ರತಿಯೊಂದು ಪಾತ್ರ ಕೂಡ ಪ್ರಸ್ತುತ ಜೀವಂತವಾಗಿದೆ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದ್ದಾರೆ. ನ್ಯಾಶನಲ್‌ ಮ್ಯೂಸಿಯಂನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಲೂ ಪ್ರತಿ ಪಾತ್ರ ಜೀವಂತವಾಗಿದೆ. ಸುತ್ತಲಿನ ಸಮಾಜನೋಡಿ. ನಿಮಗೆ ಧೃತರಾಷ್ಟ್ರ, ದುರ್ಯೋಧನ, ಶಕುನಿ ಎಲ್ಲರೂ ಕಾಣಸಿಗುತ್ತಾರೆ. ಆದರೆ, ನ್ಯಾಯಕ್ಕಾಗಿ ಧ್ವನಿಯೆತ್ತುವ ದ್ರೌಪದಿ ಮಾತ್ರ ಓರ್ವಳೇ ಎಂದಿದ್ದಾರೆ. ದ್ರೌಪದಿಯನ್ನು ಹೊಗಳಿದ ಪ್ರಣಬ್‌, ಆಕೆ ಅವಮಾನ ಮತ್ತು ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವಂಥ ಸಾಮರ್ಥ್ಯವನ್ನು ಹೊಂದಿದ್ದಳು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next