Advertisement

PM CARES Fund ತನಿಖೆಗೆ ಉದ್ಧವ್‌ ಠಾಕ್ರೆ ಒತ್ತಾಯ

09:25 PM Jun 24, 2023 | Team Udayavani |

ಮುಂಬೈ: ಜಂಬೋ ಕೋವಿಡ್‌ ಸೌಲಭ್ಯ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನೆಯ(ಉದ್ಧವ್‌ ಬಣ) ಆಪ್ತವ್ಯಕ್ತಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಇತ್ತೀಚಿನ ದಾಳಿಯ ವಿರುದ್ಧ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕಿಡಿಕಾರಿದ್ದಾರೆ.

Advertisement

ಹಾಗೆಯೇ ಪಿಎಂ ಕೇರ್ಸ್‌ ಮೂಲಕ ಸಂಗ್ರಹವಾದ ನಿಧಿ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಾವುದೇ ತನಿಖೆಯಿಂದ ನಮಗೆ ಭಯವಿಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ, ಕೊರೊನಾ ಸಮಯದಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಕಾರ್ಯ ವೈಖರಿ ಕುರಿತು ತನಿಖೆ ಕೈಗೊಳ್ಳಲಿ. ಜತೆಗೆ ಥಾಣೆ, ಪಿಂಪ್ರಿ-ಚಿಂಚಾಡ, ಪುಣೆ ಮತ್ತು ನಾಗ್ಪುರ ಪಾಲಿಕೆ ಕುರಿತು ತನಿಖೆ ನಡೆಸಲಿ’ ಎಂದು ಒತ್ತಾಯಿಸಿದ್ದಾರೆ. “ಪಿಎಂ ಕೇರ್ಸ್‌ ನಿಧಿ ಕುರಿತು ತನಿಖೆ ಏಕಿಲ್ಲ? ಕೋಟ್ಯಂತರ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ. ಕೊರೊನಾ ಸಮಯದಲ್ಲಿ ಅನೇಕ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿರಲಿಲ್ಲ. ಈ ಕುರಿತು ತನಿಖೆ ಆಗಬೇಕಿದೆ’ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next