Advertisement

ಮಧುವನ ರೈಲ್ವೇ ಮೇಲ್ಸೇತುವೆ: ಸಂಚಾರ ದುಸ್ತರ

06:20 AM Jun 23, 2018 | Team Udayavani |

ಕೋಟ: ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ.ಈ ಬಾರಿ ಕೂಡ ಇದೇ ಪರಿಸ್ಥಿತಿ ಮುಂದುವರಿದಿದ್ದು  ಹಲವು ಕಡೆ ಹೊಂಡ ಸೃಷ್ಟಿಯಾಗಿ ನೀರು ನಿಂತಿದೆ.   

Advertisement

ಸೇತುವೆಯ ಮಧ್ಯ ತಗ್ಗಾಗಿರುವುದರಿಂದ ಹಾಗೂ ನೀರು ಹೊರಗಡೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿ ರುವುದರಿಂದ  ಹೊಂಡಗಳು ಸೃಷ್ಟಿಯಾಗುತ್ತವೆ.  ಕಳೆದ ವರ್ಷ ರಸ್ತೆ ದುರಸ್ತಿಗೊಳಿಸುವ ಸಂದರ್ಭ  ಡಾಮರು ಕಾಮಗಾರಿ ಕೈಗೊಂಡರೂ ಕೂಡ ಪ್ರಯೋಜನವಾಗಿಲ್ಲ.

ಸಮಸ್ಯೆಯ ವಿರುದ್ಧ ಕಳೆದ ವರ್ಷ ಸ್ಥಳೀಯರು ಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದ್ದು ಈ ಬಾರಿ ಸಮಸ್ಯೆ ಉಲ್ಬಣಿಸುವ ಮೊದಲೇ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next