Advertisement

ಮಡಿಕೇರಿ : ದಸರಾ ಸಂಭ್ರಮದ ವೇಳೆ ಯುವಕನ ಕಗ್ಗೊಲೆ 

04:13 PM Oct 01, 2017 | |

ಮಡಿಕೇರಿ: ಇಲ್ಲಿ ನಡೆಯುತ್ತಿದ್ದ ದಸರಾ ಸಂಭ್ರಮದ ಮೆರವಣಿಗೆ ವೇಳೆ ಯುವಕನೊಬ್ಬನನ್ನು  ದುಷ್ಕರ್ಮಿಗಳು ಹೊಂಚು ಹಾಕಿ ಬರ್ಬರವಾಗಿ ಇರಿದು ಕೊಲೆಗೈದಿದ್ದಾರೆ. 

Advertisement

ದಶ ಮಂಟಪ ಆಚರಣೆ ನಡೆಯುತ್ತಿದ್ದ ವೇಳೆ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಘಟನೆ ನಡೆದಿದ್ದು ,  ಭಾನುವಾರ ನಸುಕಿನ 2.30 ರ ವೇಳೆ ಹೊಂಚು ಹಾಕಿ ಇರಿದು ಹತ್ಯೆಗೈಯಲಾಗಿದೆ. 

ರಾಜೇಶ್ವರಿ ನಗರ ನಿವಾಸಿ ಚಂದ್ರಶೇಖರ್‌ ಎನ್ನುವ 26 ವರ್ಷದ ಆಟೋ ಚಾಲಕ ಹತ್ಯೆಗೀಡಾದ ವ್ಯಕ್ತಿ. 

ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. 

ಯಾರಿಗೂ ತಿಳಿಯದಂತೆ ಜನ ಸಮೂಹದ ಮಧ್ಯೆಯೇ ಕೊಲೆ ಮಾಡಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next