Advertisement

Madikeri ಭಾಗದ ಅಪರಾಧ ಸುದ್ದಿಗಳು

12:53 AM Sep 21, 2024 | Team Udayavani |

ತಡೆದು ನಿಲ್ಲಿಸಿ ವ್ಯಕ್ತಿ ಮೇಲೆ ಹಲ್ಲೆ; ದೂರು

Advertisement

ಮಡಿಕೇರಿ: ಝೊಮೇಟೊ ಫುಡ್ ಡೆಲಿವರಿ ಬಾಯ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ನಂದೀಪ್‌ ಅವರನ್ನು ತಂಡವೊಂದು ಅಡ್ಡಗಟ್ಟಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿದೆ.

ನಗರದ ದೇಚೂರಿಗೆ ಮೋಟಾರು ಬೈಕಿನಲ್ಲಿ ಫುಡ್‌ ಡೆಲಿವರಿ ಮಾಡಿ ಮಡಿಕೇರಿ ಕಡೆಗೆ ಬರುತ್ತಿದ್ದಾಗ ದೇಚೂರಿನ ನೀರಿನ ಟ್ಯಾಂಕ್‌ ಬಳಿ ನಿಂತುಕೊಂಡಿದ್ದ ಮಡಿಕೇರಿಯ ನಿವಾಸಿಗಳಾದ ಸಜಿತ್‌, ಧನುಶ್‌ ಹಾಗೂ ಇತರರು ಸೇರಿ ತಡೆದು ನಿಲ್ಲಿಸಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾಗಿ ನಂದೀಪ್‌ ನೀಡಿದ ದೂರಿನಂತೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟಿ ಢಿಕ್ಕಿ: ಗಾಯ
ಮಡಿಕೇರಿ: ಬಿಳಿಗೈರಿ ಗ್ರಾಮದ ಮೊಹಮ್ಮದ್‌ ಅರ್ಷದ್‌ ಅವರು ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕಾಂಡನಕೊಲ್ಲಿ ಬಸ್‌ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟಿ ಢಿಕ್ಕಿಯಾಗಿದೆ. ಪರಿಣಾಮ ಅವರು ಗಾಯಗೊಂಡಿದ್ದಾರೆ.

ಕರಿಮೆಣಸು ಕಳವು
ಮಡಿಕೇರಿ: ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದ ಕಳ್ಳಿಚಂಡ ರಾಬಿನ್‌ ಅವರಿಗೆ ಸೇರಿದ ತೋಟದ ಶೆಡ್ಡಿನಲ್ಲಿ ಶೇಖರಿಸಿಟ್ಟಿದ್ದ ಅಂದಾಜು 30 ಕೆ.ಜಿ.ಯಷ್ಟು 24 ಚೀಲಗಳ ಪೈಕಿ 17 ಚೀಲಗಳನ್ನು ಕಳವುಗೈಯಲಾಗಿದೆ. ಕಳವಾದ ಕರಿಮೆಣಸಿನ ಅಂದಾಜು ಮೌಲ್ಯ 3,17,500 ರೂ. ಕಳ್ಳರು ಶೆಡ್ಡಿನ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟನ್ನು ಒಡೆದು ಒಳಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಕಳ್ಳತನವನ್ನು ಅವರಲ್ಲಿ ಕೆಲಸ ಮಾಡಿಕೊಂಡಿರುವ ಸುರೇಶ ಹಾಗೂ ಇತರರ ಮೇಲೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next