Advertisement

ವಿಜಯನಗರದಂತೆ ಮಧುಗಿರಿಯೂ ಜಿಲ್ಲೆಯಾಗಲೇಬೇಕು

05:37 PM Dec 16, 2020 | Suhan S |

ಮಧುಗಿರಿ: ರಾಜ್ಯದಲ್ಲಿ ವಿಜಯನಗರ ಜಿಲ್ಲೆಯಾದಂತೆ ಮಧುಗಿರಿಯೂ ಜಿಲ್ಲೆಯಾಗಬೇಕೆಂಬ ಕೂಗು ಹೆಚ್ಚಾಗಿದ್ದು,ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಸಹ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ಮಧುಗಿರಿ ಜಿಲ್ಲೆಗಾಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಶಾಸಕರು ಉದಯವಾಣಿಗೆ ನೀಡಿರುವ ವಿಶೇಷ ಸಂದರ್ಶನ.

Advertisement

ಮಧುಗಿರಿಜಿಲ್ಲೆಯಾಗಲು ಅರ್ಹತೆಯಿದೆಯಾ?

ಖಂಡಿತಾ, ಮಹಾರಾಜರ-ಬ್ರಿಟಿಷರ ಕಾಲದಿಂದಲೂ ಉಪವಿಭಾಗವಿದ್ದು, ಮಾಸ್ತಿ ವೆಂಕಟೇಶ ಅಯ್ಯಾಂಗಾರ್‌ ಎಸಿ ಆಗಿದ್ದರು. ಇಂತಹಇತಿಹಾಸವುಳ್ಳ ಮಧುಗಿರಿ 4 ತಾಲೂಕುಗಳ ನ್ನೊಳಗೊಂಡ ಶೈಕ್ಷಣಿಕ ಉಪವಿಭಾಗದಲ್ಲಿ ಎಲ್ಲ ಇಲಾಖೆಗಳಿವೆ. ಶೈಕ್ಷಣಿಕ ಜಿಲ್ಲೆಯಾದರೂ ಆರ್ಥಿಕವಾಗಿಹಿಂದುಳಿದಿದ್ದು ಅಭಿವೃದ್ಧಿಗಾಗಿ ಕಂದಾಯ ಜಿಲ್ಲೆ ಆಗಲೇ ಬೇಕು.

ಮಧುಗಿರಿ ತಾಲೂಕುಯಾಕೆ ಜಿಲ್ಲೆಯಾಗಬೇಕು ?

4 ತಾಲೂಕುಗಳು ತೀವ್ರ ಬರಗಾಲದಿಂದ ಸಂಕಷ್ಟದಲ್ಲಿದ್ದು, ಪ್ರಮುಖ ಉದ್ಯೋಗ ಕೃಷಿಯಾಗಿದೆ. ಅಂತರ್ಜಲ ಕುಸಿದಿದ್ದು, ಉದ್ಯೋಗ ಅರಸಿ ಜನರುಗುಳೆ ಹೋಗಿದ್ದಾರೆ. ಜಿಲ್ಲೆಯಾದರೆ ಹೆಚ್ಚುವರಿಯಾಗಿ ಬರುವ ನೀರಾವರಿ ಯೋಜನೆಗಳು ಹಾಗೂ ಕೈಗಾರಿಕೆ ಗಳಿಂದಾಗಿ ಜನತೆ ಸ್ವಾವಲಂಭಿ ಬದುಕುಕಾಣಲಿದೆ.

Advertisement

 ಮಧುಗಿರಿ ಜಿಲ್ಲೆಯಾದರೆ ಮೂಲಭೂತ ಸೌಕರ್ಯ ಕೊರತೆಯಿದೆಯಾ?

ಪೊಲೀಸ್‌ ಎಸ್ಪಿ ಕಚೇರಿ ಹಾಗೂ ಡೀಸಿ ಕಚೇರಿ ಹೊರತುಪಡಿಸಿಎಲ್ಲ ಇಲಾಖೆಗಳ ಉಪವಿಭಾಗವಿದೆ.ಜಿಲ್ಲೆಯಾಗಿಘೋಷಣೆಯಾದರೆ ಸರ್ಕಾರಿ ಕಚೇರಿಗಳಿಗೆ ಕೊರತೆಯಿಲ್ಲ. ಆದರೆ ನೀರಾವರಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಮಾತ್ರ ಪೂರಕ ಅನುದಾನ ಒದಗಿಸಬೇಕಾಗುತ್ತದೆ.

ಜಿಲ್ಲಾಕೇಂದ್ರದಿಂದಕೃಷಿ-ಕೈಗಾರಿಕೆಗಳಿಗೇನುಲಾಭ?

ಜಿಲ್ಲಾ ಕೇಂದ್ರವಾದೊಡನೆ ಅನೇಕ ಅನುದಾನ ಹರಿದು ಬರಲಿದೆ. ನೀರಾವರಿ ಯೋಜನೆ ಹಾಗೂಕೈಗಾರಿಕೆಗಳ ಸ್ಥಾಪನೆಗೆ ಮುಂದಾಲಿದ್ದು, ಕೃಷಿಯಲ್ಲೂಉದ್ಯೋಗ, ಮಾರುಕಟ್ಟೆ ವಿಸ್ತರಣೆಯಾಗಲಿದ್ದು,ಕೈಗಾರಿಕಾ ವಲಯದ ಅನುಷ್ಠಾನ ಹಾಗೂ ಎತ್ತಿನಹೊಳೆಯಿಂದ ಅಂತರ್ಜಲ ವೃದ್ಧಿಸಿ ಕೃಷಿಹಾಗೂ ಕೃಷಿಯೇತರ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.

 ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಸ್ಪಂದನೆ ಹೇಗಿದೆ ?

ಎಚ್ ಡಿಕೆ ಅವಧಿಯಲ್ಲಿ ತಂದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಸರ್ಕಾರಬದಲಾದ ಮೇಲೆಮಧುಗಿರಿಯ ಮೇಲೆ ಮಲತಾಯಿ ಧೋರಣೆ ತಾಳಲಾಗಿದೆ. ಒಳ್ಳೆಯ ಬೆಳವಣಿಗೆಯಲ್ಲ. ಸಮ್ಮಿಶ್ರ ಸರ್ಕಾರದ ಅನು ದಾನವನ್ನೂ ತಡೆಹಿಡಿದಿದ್ದು, ಕನಿಷ್ಠ ಅನುದಾನವನ್ನೂ ಸಹ ನೀಡದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುವೆ.

ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಹೇಮಾವತಿಯಿಂದಹೆಚ್ಚುವರಿ ನೀರಿಗೆಯಾವ ಕ್ರಮಕೈಗೊಂಡಿದ್ದೀರಾ ?

ವರ್ಷಕ್ಕೆ 3 ಬಾರಿ ಸಿದ್ದಾಪುರ ಕೆರೆಗೆ ನೀರು ತಂದ ಶಾಸಕ ನಾನು. ಇದು ಇತಿಹಾಸವಾಗಿದ್ದು ಯಾರ ಮೇಲೂ ಗೂಬೆ ಕೂರಿಸಲ್ಲ. ಯುಜಿಡಿ ಅನುಷ್ಠಾನಕ್ಕೆ ಬೇಕಾಗುವ ಅಗತ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು.

ಜಿಲ್ಲಾ ಕ್ಷೇತ್ರದ ಪ್ರಮುಖ ಸಂಪತ್ತು ಏನು?

ಮಧುಗಿರಿಯಲ್ಲಿವಿಶ್ವದ 2ನೇ ದೊಡ್ಡ ಏಕಶಿಲಾಬೆಟ್ಟವಿದ್ದು, ರಾಜರು,ಬ್ರಿಟಿಷರು ಆಳಿದ ಕೋಟೆ ಕೊತ್ತಲಗಳು ಅನಾವರಣ ಗೊಂಡಿವೆ. ಅಪರೂಪದ ಕೃಷ್ಣಮೃಗ ಅರಣ್ಯ ಧಾಮ, ಕರಡಿವನ್ಯಧಾಮ,ಮಹಾಪುರುಷರು ಕಟ್ಟಿದ ಪ್ರಸಿದ್ಧ ಹರಿಹರರಸಂಗಮದ ದೇಗುಲ. ಗೊರವನಹಳ್ಳಿಯಲಕ್ಷ್ಮೀ ದೇಗುಲ,ಸಿದ್ದರಬೆಟ್ಟ,ಮಿಡಿಗೇಶಿಹಾಗೂ ಪಾವಗಡದಬೆಟ್ಟಗಳು ಇತಿಹಾಸವನ್ನು ಸಾರುತ್ತವೆಹಾಗೂ ನೀರಾವರಿ ಯೋಜನೆ ಜಾರಿಯಾದರೆ ಬಂಗಾರ ಬೆಳೆಯುವಂತ ಮಣ್ಣು ಈ ಕ್ಷೇತ್ರದ ಬಹುಮುಖ್ಯ ಸಂಪತ್ತು. ಇದರಂತೆ ಪ್ರವಾಸಿ ತಾಣವಾದರೆ ಉದ್ಯೋಗ ಸೃಷ್ಟಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next