Advertisement

ಮಾ. 18: ಮರಳು ಸಮಸ್ಯೆಗೆ ಸಚಿವರಿಂದ ಸಭೆ

11:29 AM Mar 11, 2017 | |

ಉಡುಪಿ: ಮರಳು ಸಮಸ್ಯೆ ಕುರಿತು ಮಾ. 18ರಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆನ್ನೈ ಹಸುರು ಪೀಠದ ತೀರ್ಪಿನಂತೆ ಮತ್ತೆ ತಜ್ಞರಿಂದ ವರದಿ ತರಿಸಿಕೊಂಡು ಪ್ರಕ್ರಿಯೆ ನಡೆಸಬೇಕಾ ಗಿದೆ. ಇದಕ್ಕೆ ಕನಿಷ್ಠ ಒಂದು ತಿಂಗಳು ಬೇಕು. ಮೀನುಗಾರಿಕಾ ದೋಣಿಗಳು ಚಲಿಸಲು ಕಷ್ಟವಾಗುತ್ತದೆ ಎಂಬ ಸ್ಥಿತಿ 
ಯಲ್ಲಿ ಮಾತ್ರ ಮರಳು ದಿಬ್ಬಗಳನ್ನು ತೆಗೆಯಬೇಕೆಂದು ಹಸಿರುಪೀಠ ತಿಳಿಸಿದೆ. ಇದುವರೆಗೆ ಮೀನುಗಾರರಿಂದ ದೋಣಿ ಚಲಿಸಲು ಕಷ್ಟವಾಗು ತ್ತದೆ ಎಂಬ ಮನವಿ ಬಂದಿಲ್ಲ ಎಂದರು. 

ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಸರಕಾರಿ ಕಾಮಗಾರಿಗಳಿಗೆ ಮರಳಿನ ಕೊರತೆ ಇಲ್ಲ. ಖಾಸಗಿಯವರಿಗೂ ನೀಡಲಾಗುತ್ತಿದೆ ಎಂದರು. ಸ್ವರ್ಣಾ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ 2.5 ಕೋ. ರೂ. ಪ್ರಸ್ತಾವ ಇರುವುದರಿಂದ ಇದನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು. 

ಕುಡಿಯುವ ನೀರಿನ ಸಮಸ್ಯೆ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 80 ಲ. ರೂ. ಕುಡಿಯುವ ನೀರಿಗಾಗಿ ಬಂದಿದೆ. ಜಿ.ಪಂ. ಅಧ್ಯಕ್ಷರ ವಿವೇಚನ ನಿಧಿಗೆ 50 ಲ. ರೂ. ಬಂದಿದೆ. ಈಗಿನ್ನೂ ಕುಡಿಯುವ ಸಮಸ್ಯೆ ಉಂಟಾಗಿಲ್ಲ. ಆರೂರು, ಬೈಂದೂರು, ಕಟಪಾಡಿ ಮೊದಲಾದೆಡೆ ಮಾತ್ರ ಸ್ವಲ್ಪ ಸಮಸ್ಯೆಯಾಗಿದೆ. ಎಪ್ರಿಲ್‌, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಬಹುದು. ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next