Advertisement

Karnataka Polls 2023; ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ಮತಯಾಚನೆ

09:58 AM Apr 26, 2023 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಮಂಗಳವಾರ ಕ್ಷೇತ್ರದ ಹಲವೆಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ.

Advertisement

ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಸಭೆಯ ಜತೆಗೆ ಕ್ಷೇತ್ರದ ವಿವಿಧ ಭಾಗಗಳಿಗೆ ಸಂಚರಿಸಿ ತಮ್ಮ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿ ಅವರು ಮತಯಾಚನೆ ನಡೆಸಿದ್ದಾರೆ.

ವಸಂತಪುರ ವಾರ್ಡ್‌ನಲ್ಲಿ ಪಕ್ಷ ಸಂಘಟನೆ ಹಾಗೂ ಮತಯಾಚನೆಯ ಕಾರ್ಯತಂತ್ರದ ಕುರಿತು ಅವರು ಸ್ಥಳೀಯ ಮುಖಂಡರು, ಕಾರ್ಯಕರ್ತರೊಡನೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪಾಂಚಲ್ , ಪದಾಧಿಕಾರಿಗಳಾದ ಕೇಶವ್‌ ರಾಜ್ , ಶ್ರೀಧರ್‌ ಮೂರ್ತಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಹಾಗೆಯೇ ಕ್ಲಾಸಿಕ್‌ ಲೇಔಟ್‌, ಕಾಳೇನ ಅಗ್ರಹಾರ ಉದ್ಯಾನವನ ಹಾಗೂ ಎಂಎಲ್‌ಎ ಲೇಔಟ್‌ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಸಾರ್ವಜನಿರಲ್ಲಿ ಮನವಿ ಮಾಡಿದರು.

Advertisement

ಈ ವೇಳೆ ಪಕ್ಷದ ಮುಖಂಡರಾದ ಟಿ.ನಾರಾಯಣ್‌, ಜಯರಾಮ್ , ಚುಂಚಘಟ್ಟ ಮಣಿ, ಅಭಿಷೇಕ್‌ ಗೌಡ,ಅರುಣ್‌ ಸಿಂಹ, ಭಾಸ್ಕರ್‌ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next