Advertisement

ಉ.ಪ್ರ. ಸಚಿವ ಸಂಪುಟದಲ್ಲಿ ಹಲವು ಸ್ಥಾನ ತೆರವು; ಶೀಘ್ರ ಮೊದಲ ಪುನಾರಚನೆ

09:48 AM May 28, 2019 | Sathish malya |

ಲಕ್ನೋ : ಈಚೆಗೆ ಮುಗಿದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿರುವ ಕಾರಣ ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಕೆಲವು ಸ್ಥಾನಗಳು ತೆರವಾಗಿವೆ.

Advertisement

ಅಂತೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸದ್ಯದಲ್ಲೇ ತಮ್ಮ ಸಚಿವ ಸಂಪುಟದ ಮೊದಲ ಪುನಾರಚನೆ ಕೈಗೊಳ್ಳಲಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಿಎಂ ಆದಿತ್ಯನಾಥ್‌ ಸಂಪುಟದ ಮೂವರು ಸಚಿವರು ಗೆಲುವು ಸಾಧಿಸಿದ್ದಾರೆ.

ಅತೃಪ್ತ ಸಚಿವ ಮತ್ತು ಎಸ್‌ಬಿಎಸ್‌ಪಿ ನಾಯಕ ಒ ಪಿ ರಾಜಭರ್‌ ಅವರನ್ನು ಸಚಿವ ಪದದಿಂದ ಕಿತ್ತು ಹಾಕಲಾಗಿತ್ತು. ಈ ರೀತಿಯಲ್ಲಿ ತೆರವಾಗಿರುವ ಸ್ಥಾನಗಳನ್ನು ಸಿಎಂ ಯೋಗಿ ತುಂಬಬೇಕಿದೆ.

ಉ.ಪ್ರ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿನ 80 ಸೀಟುಗಳ ಪೈಕಿ 62 ಸೀಟುಗಳನ್ನು ಗೆದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next