Advertisement

ಅಗಲಿದ ಸಂಸದ ಹುಕುಂ ಸಿಂಗ್‌ಗೆ ಶ್ರದ್ಧಾಂಜಲಿ; ಸಂಸತ್‌ ಮಂದೂಡಿಕೆ

12:11 PM Feb 05, 2018 | Team Udayavani |

ಹೊಸದಿಲ್ಲಿ : ಕಳೆದ ಶನಿವಾರ ನಿಧನ ಹೊಂದಿದ್ದ  ಬಿಜೆಪಿ ಎಂಪಿ ಹುಕುಂ ಸಿಂಗ್‌ ಅವರಿಗೆ ಇಂದು ಬೆಳಗ್ಗೆ ಶ್ರದ್ಧಾಂಜಲಿ ಅರ್ಪಿಸಲಾದ ಬಳಿಕ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

Advertisement

ಇಂದು ಬೆಳಗ್ಗೆ ಸದನವು ಕಲಾಪಕ್ಕೆ ಸಮಾವೇಶಗೊಂಡೊಡನೆಯೇ ಹೊಸ ಕಾಂಗ್ರೆಸ್‌ ಸದಸ್ಯರಾದ ರಾಜಸ್ಥಾನದ ಕರಣ್‌ ಸಿಂಗ್‌ ಮತ್ತು ರಘು ಶರ್ಮಾ ಹಾಗೂ ಟಿಎಂಸಿ ಸದಸ್ಯರಾದ ಪಶ್ಚಿಮ ಬಂಗಾಲದ ಸಜ್‌ದಾ ಅಹ್ಮ್ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು. 

ಆ ಬಳಿಕ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಅಗಲಿದ ಸಂಸದ ಹುಕುಂ ಸಿಂಗ್‌ ಅವರಿಗೆ ಶದ್ದಾಂಜಲಿ ಅರ್ಪಿಸುವ ನಿರ್ಣಯ ಮಂಡಿಸಿದರು. ಶ್ರದ್ಧಾಂಜಲಿ ಅರ್ಪಣೆ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಅಗಲಿದ ಸಂಸದ 79 ಹರೆಯದ ಹುಕುಂ ಸಿಂಗ್‌ ಅವರು ಉತ್ತರ ಪ್ರದೇಶದ ಕೈರಾನಾ ಕ್ಷೇತ್ರದಿಂದ ಗೆದ್ದು ಬಂದವರು.   

Advertisement

Udayavani is now on Telegram. Click here to join our channel and stay updated with the latest news.

Next