Advertisement

ಲಾರಿ ಕಳ್ಳತನ: ಆರೋಪಿ ಬಂಧನ

03:07 PM Mar 31, 2022 | Team Udayavani |

ಹೊಸಪೇಟೆ: ನಗರದ ಹೊರವಲಯದ ಕಾರಿಗನೂರು ಗ್ರಾಮದಲ್ಲಿ ನಿಲ್ಲಿಸಿದ್ದ ಟಿಪ್ಪರ್‌ ಲಾರಿಯನ್ನು ಕಳವು ಮಾಡಿದ್ದ ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕ್ಯಾತನಹಳ್ಳಿಯ ನಿವಾಸಿ ಆರ್‌.ತಿಪ್ಪೇಸ್ವಾಮಿ (24) ಬಂಧಿತ ಆರೋಪಿ.

Advertisement

ಮಾ. 29ರಂದು ಟಿಪ್ಪರ್‌ ಲಾರಿ ಕಳವು ಮಾಡಿಕೊಂಡು ಹೋಗಿದ್ದು, ಈ ಕುರಿತು ಲಾರಿ ಮಾಲೀಕರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು 24 ಗಂಟೆಗಳ ಒಳಗೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಗರಗ ನಾಗಲಾಪುರ ರಸ್ತೆಯಲ್ಲಿ ಆರೋಪಿಯನ್ನು 10 ಲಕ್ಷ ರು. ಮೌಲ್ಯದ ಲಾರಿ ಸಮೇತ ವಶಕ್ಕೆ ಪಡೆದಿದ್ದು, ಲಾರಿ ಕಳವು ಮಾಡಿರುವ ಕುರಿತು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಐ ಶ್ರೀನಿವಾಸ್‌ ಮೇಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿ. ರಾಘವೇಂದ್ರ, ಕೊಟ್ರೇಶ್‌ ಏಳಬೆಂಚಿ, ಜೆ.ಕೊಟ್ರೇಶ್‌, ಅಡಿವೆಪ್ಪ, ಪ್ರಕಾಶ್‌, ಬಂಡಿಮೇಗಳ ನಾಗರಾಜ, ಕೆ.ಸುಭಾಸ್‌, ಆನಂದಗೌಡ ಕಾರ್ಯಾಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next