Advertisement

ಕೆನರಾ ಕ್ಷೇತ್ರ; ನಾನು‌ ಆಕಾಂಕ್ಷಿಯಲ್ಲ,ಯಾರು ನಿಂತರೂ ಗೆಲುವು ನಮ್ಮದು:ದೇಶಪಾಂಡೆ

03:26 PM Feb 18, 2024 | Team Udayavani |

ಶಿರಸಿ: ಬರಲಿರುವ ಲೋಕ ಸಭಾ‌ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

Advertisement

ಅವರು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಹೆಸರುಗಳಲ್ಲಿ ಕೇಳಿ ಬಂದಿದೆ. ಮಾಧ್ಯಮಗಳಲ್ಲೂ ನೋಡಿದ್ದೇನೆ. ಯಾರು ಅಭ್ಯರ್ಥಿ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಾರೇ ನಿಂತರೂ ಗೆಲುವು‌ ನಮ್ಮದೇ. ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಬರಲಿದೆ. ಅದರಲ್ಲಿ ಕೆನರಾ‌ ಲೋಕಸಭಾ‌ ಕ್ಷೇತ್ರವೂ ಒಂದು ಎಂದರು.

ಬಜೆಟ್ ಕೊರತೆ ನಿಜ. ಸಂಪನ್ಮೂಲ ಬೇಕು. ಆದರೂ ಸಹ ಆರ್ಥಿಕ ಶಿಸ್ತು ಹೊಂದಿದ ಬಜೆಟ್. ರಾಜ್ಯದ ಎಲ್ಲ ಕ್ಷೇತ್ರಕ್ಕೂ ನ್ಯಾಯ ಸಿಕ್ಕಿದೆ,‌ ಸಿಗಲಿದೆ ಎಂದ ಅವರು ಗ್ಯಾರಂಟಿ ಶಬ್ಧ ಕೊಟ್ಟಿದ್ದು ಕಾಂಗ್ರೆಸ್. ಆಗ ಟೀಕೆ‌ ಮಾಡಿದ ಬಿಜೆಪಿ ಈಗ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ ಎಂದೂ ಟಾಂಗ್ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next