Advertisement

Lok Sabha polls: ಕಾಂಗ್ರೆಸ್‌ ಪರ ಮತ ಹಾಕದಿದ್ರೆ ಗ್ಯಾರಂಟಿ ರದ್ದಾಗಲಿದೆ: ಶಾಸಕ ಎಚ್ಚರಿಕೆ

07:13 PM Mar 03, 2024 | Team Udayavani |

ಬಂಗಾರಪೇಟೆ(ಕೋಲಾರ): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಮತ ಚಲಾವಣೆ ಆಗದಿದ್ದರೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ರದ್ದಾಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಎಸ್‌.ಎನ್‌.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಮತದಾರರು ಬೇರೆ ಪಕ್ಷಕ್ಕೆ ಮತ ಹಾಕಿದರೆ 5 ಗ್ಯಾರಂಟಿಗಳು ರದ್ದಾಗಲಿದೆ.

ಪ್ರತಿ ಕುಟುಂಬಕ್ಕೂ ವರ್ಷಕ್ಕೆ ಕನಿಷ್ಠ 45 ರಿಂದ 50 ಸಾವಿರ ರೂ.ಗಳ ಅನುಕೂಲವಾಗುತ್ತಿರುವುದರಿಂದ ಈ ಯೋಜನೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದರು.

ಭಾಷಣ ಮಾಡಲು ನಿರಾಕರಣೆ: ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳನ್ನು ಕಂಡ ಶಾಸಕರು ಅಧಿಕಾರಿಗಳ ನಡೆ ಖಂಡಿಸಿ ಭಾಷಣ ಮಾಡಲು ನಿರಾಕರಿಸಿದರು, ತದನಂತರ ಒಬ್ಬರೊಬ್ಬರಂತೆ ಕಾರ್ಯಕ್ರಮಕ್ಕೆ ಜನರು ಬರತೊಡಗಿದರು. ಈ ಸಂದರ್ಭದಲ್ಲಿ ಸಭಿಕರು ಶಾಸಕರಿಗೆ ಭಾಷಣ ಮಾಡುವಂತೆ ಒತ್ತಾಯಿಸಿಡಿದರು. ಅವರ ಮನವಿಗೆ ಸ್ಪಂದಿಸಿದ ಶಾಸಕರು ಭಾಷಣವನ್ನು ಮುಂದುವರಿಸಿದ ಪ್ರಸಂಗ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next