Advertisement

Lok Sabha Elections ಸೋಲು; ಪರಾಮರ್ಶೆಗೆ ಇಂದು, ನಾಳೆ ಕಾಂಗ್ರೆಸ್‌ ಸಭೆ

01:19 AM Jul 11, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ನ ಕಳಪೆ ಸಾಧನೆಯ ಬಗ್ಗೆ ಜು. 11 ಮತ್ತು 12ರಂದು ಎಐಸಿಸಿ ಸತ್ಯಶೋಧನ ಸಮಿತಿ ಪರಾಮರ್ಶೆ ನಡೆಸಲಿದೆ.

Advertisement

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫ‌ಲವಾಗಿತ್ತು. ಈ ಹಿನ್ನಡೆಯ ಹಿಂದಿನ ಕಾರಣಗಳ ಪತ್ತೆಗೆ ಎಐಸಿಸಿಯು ಮಧುಸೂದನ್‌ ಮಿಸ್ತ್ರಿ ನೇತೃತ್ವ ದಲ್ಲಿ ಸಂಸದರಾದ ಗೌರವ್‌ ಗೊಗೊಯ್‌ ಮತ್ತು ಹಿಬಿ ಇಡೆನ್‌ ಅವರನ್ನು ಒಳಗೊಂಡ ಸತ್ಯಶೋಧನ ಸಮಿತಿ ರಚಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಿದೆ. ಜತೆಗೆ ರಾಜ್ಯದಿಂದ ಆಯ್ಕೆಯಾದ ಎಐಸಿಸಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ನಾಯಕರು, ಉಸ್ತುವಾರಿ ಸಚಿವರು, ನಿಗಮ-ಮಂಡಳಿ ಅಧ್ಯಕ್ಷರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಲೋಕಸಭಾ ಅಭ್ಯರ್ಥಿಗಳು, ಮುಂಚೂಣಿ ಘಟಕಗಳು ಮತ್ತು ವಿಭಾಗಗಳ ಅಧ್ಯಕ್ಷರಿಂದಲೂ ಅಭಿಪ್ರಾಯ ಸಂಗ್ರಹಿಸಲಿದೆ. ಇದನ್ನು ಆಧರಿಸಿ ಸಮಗ್ರ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದೆ.

ಈ ವೇಳೆ ಅಸಮಾಧಾನಗಳು ಹೊರಬೀಳುವುದರ ಜತೆಗೆ ಬಣಗಳು ಇರುವುದರಿಂದ, ಒಂದರ ವಿರುದ್ಧ ಮತ್ತೂಂದು ದೂರು ನೀಡುವ ಸಾಧ್ಯತೆಗಳೂ ಇವೆ. ಹೆಚ್ಚುವರಿ ಡಿಸಿಎಂಗೆ ಮಣೆಹಾಕದಿರುವುದು, ನಾಯಕರ ಪ್ರತಿಷ್ಠೆಗಳು ಹಿನ್ನಡೆಗೆ ಹೇಗೆ ಕಾರಣವಾದವು ಎಂಬುದೂ ಈ ವೇಳೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಭೆಗಳ ವಿವರ
ಗುರುವಾರ ಬೆಳಗ್ಗೆ 10ರಿಂದ 11ರ ವರೆಗೆ ಎಐಸಿಸಿ ಪದಾಧಿಕಾರಿಗಳು ಮತ್ತು ಸಿಡಬ್ಲ್ಯೂಸಿ ಸದಸ್ಯರು, 11ರಿಂದ ಮಧ್ಯಾಹ್ನ 1ರ ವರೆಗೆ ಹಿರಿಯ ನಾಯಕರು, ಮಧ್ಯಾಹ್ನ 1ರಿಂದ 2ರ ವರೆಗೆ ಸಚಿವರು, 3ರಿಂದ 3.30ರ ವರೆಗೆ ರಾಜ್ಯಸಭಾ ಸದಸ್ಯರು, 3.30ರಿಂದ 5.30ರ ವರೆಗೆ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಸಂಜೆ 5.30ರಿಂದ 7ರ ವರೆಗೆ ಜಿಲ್ಲಾ ಘಟಕದ ಅಧ್ಯಕ್ಷರೊಂದಿಗೆ ಸಭೆ ಏರ್ಪಡಿಸಲಾಗಿದೆ.

Advertisement

ಶುಕ್ರವಾರ ಬೆಳಗ್ಗೆ 10ರಿಂದ 12.30ರ ವರೆಗೆ ಕೆಪಿಸಿಸಿ ಪದಾಧಿಕಾರಿಗಳು, 12.30ರಿಂದ 1.30 ಲೋಕಸಭಾ ಅಭ್ಯರ್ಥಿಗಳು, ಮಧ್ಯಾಹ್ನ 2.30ರಿಂದ 2023 ವಿಧಾನಸಭಾ ಅಭ್ಯರ್ಥಿಗಳು, 5ರಿಂದ 6.30 ನಿಗಮ-ಮಂಡಳಿ ಅಧ್ಯಕ್ಷರು ಮತ್ತು 6.30ರಿಂದ 7ರ ವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಸಭೆ ನಡೆಸಲಿದೆ ಎಂದು ಕೆಪಿಸಿಸಿ ಪ್ರಕಟನೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next