Advertisement

Lok Sabha Elections: ಕಾಂಗ್ರೆಸ್‌ ವೀಕ್ಷಕರ ನೇಮಕ

11:42 PM Nov 25, 2023 | Team Udayavani |

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಗೆ ಪಕ್ಷದದಿಂದ ವೀಕ್ಷಕರನ್ನು ನೇಮಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಅವರು ಆದೇಶಿಸಿದ್ದಾರೆ.

Advertisement

ವಿಧಾನ ಸಭಾಕ್ಷೇತ್ರ: ಬೆಳ್ತಂಗಡಿ ಕ್ಷೇತ್ರ-ಎಂ.ಎಸ್‌. ಮಹಮ್ಮದ್‌, ಮೂಡುಬಿದಿರೆ – ಮಹಾಬಲ ಮಾರ್ಲ, ಮಂಗಳೂರು ನಗರ ಉತ್ತರ-ಕೆ. ಶುಭೋದಯ ಆಳ್ವ, ಮಂಗಳೂರು ನಗರ ದಕ್ಷಿಣ-ಪ್ರತಿಭಾ ಕುಳಾç, ಮಂಗಳೂರು-ಎ.ಸಿ. ವಿನಯರಾಜ್‌, ಬಂಟ್ವಾಳ-ಆರ್‌.ಕೆ. ಪೃಥ್ವಿರಾಜ್‌, ಪುತ್ತೂರು-ಶಶಿಧರ್‌ ಹೆಗ್ಡೆ, ಸುಳ್ಯ-ದುರ್ಗಪ್ರಸಾದ್‌ ರೈ ಕುಂಬ್ರ ಅವರನ್ನು ಆಯ್ಕೆ ಮಾಡಲಾಗಿದೆ.

ಬ್ಲಾಕ್‌ ಕಾಂಗ್ರೆಸ್‌: ಬೆಳ್ತಂಗಡಿ ನಗರ ಬ್ಲಾಕ್‌-ಮೊಹಮ್ಮದ್‌ ಅಲಿ ಪುತ್ತೂರು, ಬೆಳ್ತಂಗಡಿ ಗ್ರಾಮೀಣ-ಸತೀಶ್‌ ಕುಮಾರ್‌ ಕೆಡಿಂಜೆ, ಮೂಡುಬಿದಿರೆ-ಅನಿಲ್‌ ಕುಮಾರ್‌, ಮುಲ್ಕಿ-ಪ್ರವೀಣ್‌ ಚಂದ್ರ ಆಳ್ವ, ಸುರತ್ಕಲ್‌-ಗಿರೀಶ್‌ ಶೆಟ್ಟಿ, ಗುರುಪುರ-ಪುರಂದರ ದೇವಾಡಿಗ, ಮಂಗಳೂರು ನಗರ-ಮೊಹಮ್ಮದ್‌ ಕುಂಜತ್ತಬೈಲ್‌, ಮಂಗಳೂರು ದಕ್ಷಿಣ- ಚಿತ್ತರಂಜನ್‌ ಶೆಟ್ಟಿ ಬೊಂಡಾಲ, ಉಳ್ಳಾಲ – ಟಿ.ಕೆ. ಸುಧೀರ್‌, ಮುಡಿಪು – ನೀರಜ್‌ ಚಂದ್ರಪಾಲ್‌, ಬಂಟ್ವಾಳ – ಮಹೇಶ್‌ ರೈ, ಕಾವು, ಪಾಣೆಮಂಗಳೂರು – ಗಣೇಶ್‌ ಪೂಜಾರಿ, ಪುತ್ತೂರು-ಜಯಪ್ರಕಾಶ್‌ ರೈ, ವಿಟ್ಲ ಉಪ್ಪಿನಂಗಡಿ-ಉಮ್ಮರ್‌ ಫಾರೂಕ್‌ ಪುದು, ಸುಳ್ಯ-ಭಾಸ್ಕರ್‌ ಗೌಡ, ಕೋಡಿಂಬಾಳ, ಕಡಬ-ಉಮಾನಾಥ್‌ ಶೆಟ್ಟಿ ಅವರನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next