Advertisement

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

01:06 AM Apr 27, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಎಂದಿಗಿಂತ ಕಡಿಮೆಯಿತ್ತು. ಒಂದಷ್ಟು ಮಂದಿ ರಜೆಯನ್ನು ಮನೆಯಲ್ಲೇ ಕಳೆದಿದ್ದಾರೆ. ಪಿಲಿಕುಳ ಜೈವಿಕ ಉದ್ಯಾನವನಕ್ಕೆ ರಜೆ ನೀಡಲಾಗಿತ್ತು. ಆದರೂ ಈ ಬಗ್ಗೆ ತಿಳಿಯದ ಒಂದಷ್ಟು ಮಂದಿ ಪ್ರವಾಸಿಗರು ಬಂದು ವಾಪಾಸಾದರು.

Advertisement

ಉಳಿದಂತೆ ಬೀಚ್‌ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರಲಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಅಗತ್ಯ ಸೇವೆಗಳ ನೌಕರರಿಗೆ ಮತದಾನ ಮಾಡಿ ಬಂದು ಕೆಲಸ ಮಾಡುವಂತೆ ಸಂಸ್ಥೆಗಳ ಮುಖ್ಯಸ್ಥರ ಸೂಚಿಸಿದ್ದರಿಂದ ಕೆಲವರು ಮತದಾನ ಮಾಡಿ ಕೆಲಸಕ್ಕೆ ತೆರಳಿದ್ದಾರೆ. ಅರೆ ಸರಕಾರಿ ಮತ್ತು ಸರಕಾರಿ ಸಂಸ್ಥೆ, ಸರಕಾರಿ – ಖಾಸಗಿ ಬ್ಯಾಂಕ್‌ಗಳ ನೌಕರರಿಗೆ ಸಂಪೂರ್ಣ ರಜೆ ಇತ್ತು.

 

Advertisement

Udayavani is now on Telegram. Click here to join our channel and stay updated with the latest news.

Next