Advertisement

ಲಾಕ್‌ಡೌನ್‌: ವೀಡಿಯೋ ಕಾಲ್‌ ಮೂಲಕ ನಡೆಯಿತು ವೈಕುಂಠ ಸಮಾರಾಧನೆ!

09:18 AM Mar 30, 2020 | sudhir |

ಕಾಸರಗೋಡು: ಕೋವಿಡ್ 19 ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಲ್ಲಿರುವ ಕಾರಣ ವ್ಯಕ್ತಿಯೊಬ್ಬರ ವೈಕುಂಠ ಸಮಾರಾಧನೆಯನ್ನು ವೀಡಿಯೋ ಕಾಲ್‌ ಮೂಲಕ ಮಾಡಿರುವ ಘಟನೆ ನಡೆದಿದೆ.

Advertisement

ನೆಟ್ಟಣಿಗೆಯ ಕೈಪಂಗಳದ ಉದಯ ಶಂಕರ ಭಟ್‌ (64) ಅವರ ವೈಕುಂಠ ಸಮಾರಾಧನೆ ಮಾ. 27ರಂದು ಸ್ವಗೃಹದಲ್ಲಿ ನಡೆಯಿತು. ಲಾಕ್‌ಡೌನ್‌ ಕಾರಣ ವೈದಿಕ ವಿಧಿಗಳನ್ನು ಪೂರೈಸಲು ಈ ಹಿಂದೆ ಒಪ್ಪಿದವರಿಗೆ ಬರಲು ಸಾಧ್ಯವಾಗಲಿಲ್ಲ. ಉತ್ತರಕ್ರಿಯೆ ಅನಿವಾರ್ಯ ವಿಧಿಯಾಗಿರುವ ಕಾರಣ ಪುತ್ತೂರು ಕುಂಬ್ರದ ಪಟ್ಲಮೂಲೆ ಮನೆಯ ವೇ|ಮೂ| ಕೆ. ಕೃಷ್ಣ ಕುಮಾರ್‌ ಉಪಾಧ್ಯಾಯ ಅವರು ವೀಡಿಯೋ ಕಾಲ್‌ ಮೂಲಕ ಕ್ರಮಗಳ ಮಾಹಿತಿ ನೀಡಿದರು. ಉದಯ ಶಂಕರ ಭಟ್ಟರ ಪುತ್ರ ನಟರಾಜ ಭಟ್‌ ಅವರು ಸದ್ಗತಿ ಕ್ರಿಯೆಗಳನ್ನು ಪೂರೈಸಿದರು. ಕಾರ್ಯಕ್ರಮದಲ್ಲಿ ಮನೆಯವರು ಮಾತ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next