Advertisement

ಲಾಕ್‌ಡೌನ್‌ನಿಂದ ಶೇ. 96 ಜನರ ಆದಾಯಕ್ಕೆ ಬ್ರೇಕ್‌

06:48 PM Mar 01, 2021 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಆಹಾರ ಹಕ್ಕುಗಳ ಅಭಿಯಾನದಡಿಯಲ್ಲಿ  ನಡೆಸಿದ ಸಮೀಕ್ಷೆ ಪ್ರಕಾರ, ಕಳೆದ ವರ್ಷದ

Advertisement

ಕೋವಿಡ್ ಸೋಂಕು ಪ್ರೇರಿತ ಲಾಕ್‌ಡೌನ್‌ನಿಂದಶೇ. 96ರಷ್ಟು ಜನರು ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಸಾಮಾಜಿಕ ಸಂಸ್ಥೆ ಹೇಳಿದೆ.

ಉದ್ಯೋಗ ನಷ್ಟ ಮತ್ತು ಕೆಲಸ ದೊರೆಯದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಪ್ರತಿ ಐದು ವ್ಯಕ್ತಿಗಳಲ್ಲಿ ಓರ್ವ ವ್ಯಕ್ತಿಯ ಬಳಿ ಆಹಾರವನ್ನು ಖರೀದಿಸಲು ಹಣವಿಲ್ಲದ ಕಾರಣ ಹಸಿವಿನಿಂದ ಬಳಲುತ್ತಿದ್ದಾನೆಂದು ಆಹಾರ ಅಧಿಕಾರಅಭಿಯಾನದ ರಾಜ್ಯ ಸಂಚಾಲಕಿ ಮುಕ್ತಾ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಹಾರ ಮತ್ತು ಪೌಷ್ಟಿಕಾಂಶ ಕ್ಷೇತ್ರದಕಾರ್ಯಕರ್ತರ ಗುಂಪು ಕಳೆದ ವರ್ಷ ಮೇ ಮತ್ತುಸೆಪ್ಟಂಬರ್‌ನಲ್ಲಿ ಈ ಅಭಿಯಾನದ ಅಡಿಯಲ್ಲಿಸಮೀಕ್ಷೆ ನಡೆಸಿತ್ತು. ಈ ವೇಳೆ ಮುಂಬಯಿ, ಥಾಣೆ, ರಾಯಗಢ, ಪುಣೆ, ನಂದೂರ್‌ಬಾರ್‌, ಸೊಲ್ಲಾಪುರ, ಪಾಲ^ರ್‌, ನಾಸಿಕ್‌, ಧುಲೆ ಮತ್ತು ಜಲ್ಗಾಂವ್‌ನಲ್ಲಿ ಒಟ್ಟು 250 ಜನರನ್ನು ಸಮೀಕ್ಷೆ ನಡೆಸಲಾಯಿತು.

ಕಳೆದ ವರ್ಷ ದೇಶದಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಕೇಂದ್ರವು ಕಳೆದ ಮಾರ್ಚ್‌ನಿಂದ ರಾಷ್ಟ್ರವ್ಯಾಪಿಲಾಕೌಡೌನ್‌ ಘೋಷಿಸಿತ್ತು. ಕೆಲವು ತಿಂಗಳುಗಳಬಳಿಕ ಹಂತಹಂತವಾಗಿ ನಿರ್ಬಂಧಗಳನ್ನುಸಡಿಲಿಸಲಾಯಿತು. ಸಮೀಕ್ಷೆ ನಡೆಸಿದವರಲ್ಲಿಶೇ. 96ರಷ್ಟು ಜನರ ಆದಾಯವು ಲಾಕ್‌ಡೌನ್‌ ಅವಧಿಯಲ್ಲಿ ತೀವ್ರವಾಗಿ ಕುಸಿದಿದೆ ಎಂದು ತಿಳಿದುಬಂದಿತ್ತು. ಲಾಕ್‌ಡೌನ್‌ ಅನ್ನುತೆಗೆದುಹಾಕಿದ ಐದು ತಿಂಗಳ ಬಳಿಕವೂ ಅವರಆರ್ಥಿಕ ಪರಿಸ್ಥಿತಿ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

Advertisement

ಕಳೆದ ವರ್ಷ ಲಾಕ್‌ಡೌನ್‌ ಜಾರಿಗೆಬಂದ ಮೊದಲ ಕೆಲವು ತಿಂಗಳುಗಳಲ್ಲಿಪ್ರತಿಕ್ರಿಯಿಸಿದವರ ಗಳಿಕೆಯ ಸ್ಥಿತಿಯ ಬಗ್ಗೆಕೇಳಿದಾಗ, ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಶೇ. 43ರಷ್ಟು ಜನರಿಗೆ ಯಾವುದೇ ಆದಾಯವಿಲ್ಲ. ಅವರಲ್ಲಿ ಕೇವಲ ಶೇ. 10ರಷ್ಟು ಜನರು ಮಾತ್ರ ಲಾಕ್‌ಡೌನ್‌ ಪೂರ್ವದಲ್ಲಿ ಗಳಿಸಿದ ಆದಾಯಕ್ಕೆಮರಳಿದ್ದಾರೆ. ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಯಾವುದೇ ಆದಾಯವಿಲ್ಲದ ಶೇ. 34ರಷ್ಟು ಜನರ ಪರಿಸ್ಥಿತಿ ಸೆಪ್ಟಂಬರ್‌-ಅಕ್ಟೋಬರ್‌ ವರೆಗೆಯಾವುದೇ ಬದಲಾವಣೆ ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಶೇ. 12 ಜನರು ತಮ್ಮ ಆಭರಣಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಶೇ. 3ರಷ್ಟು ಜನರು ಲಾಕ್‌ಡೌನ್‌ ಸಮಯದಲ್ಲಿ ಆಹಾರವನ್ನು ಖರೀದಿಸಲು ತಮ್ಮ ಜಮೀನು ಮಾರಾಟ ಮಾಡಿದ್ದಾರೆ ಎಂದು ಮುಕ್ತಾ ಶ್ರೀವಾಸ್ತವ ಹೇಳಿದ್ದಾರೆ.

ಪೌಷ್ಠಿಕಾಂಶದ ಅಂಶಗಳಲ್ಲಿ ಧಾನ್ಯಗಳಕಡಿಮೆ ಬಳಕೆ ಶೇ. 63ರಷ್ಟು, ತರಕಾರಿಗಳು ಶೇ. 76ರಷ್ಟು, ದ್ವಿದಳ ಧಾನ್ಯಗಳು ಶೇ.71ರಷ್ಟು ಮತ್ತು ಮಾಂಸಾಹಾರ ಶೇ. 82ರಷ್ಟು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಸ್ನೇಹಿತರು, ಸಂಬಂಧಿಕರಿಂದ ಸಾಲ :

ಸಮೀಕ್ಷೆಗೆ ಒಳಪಡಿಸಿದ ಒಟ್ಟು ಮಂದಿಯ ಪೈಕಿ ಶೇ. 52ರಷ್ಟು ಗ್ರಾಮೀಣ ಪ್ರದೇಶದವರು ಮತ್ತು ಉಳಿದವರು ನಗರ ವ್ಯಾಪ್ತಿಯವರು. ಸಮೀಕ್ಷೆಯಲ್ಲಿ ಶೇ. 60ರಷ್ಟು ಮಹಿಳೆಯರು ಸೇರಿದ್ದಾರೆ. ಈಗಾಗಲೇ ಕಡಿಮೆ ಆದಾಯದಿಂದಾಗಿ ಕುಟುಂಬದ ನಿರ್ವಹಣೆ ಮಾಡುವುದು ಗ್ರಾಮೀಣ ಜನರಿಗೆ ಕಷ್ಟವಾಗುತ್ತಿದೆ. ರಾಷ್ಟ್ರವ್ಯಾಪಿ ಆಹಾರ ಹಕ್ಕು ಅಭಿಯಾನದ ಅಂಗವಾಗಿ ನಡೆಸಿದ ಸಮೀಕ್ಷೆಯ ಪ್ರತಿಸ್ಪಂದಕರಲ್ಲಿ ಶೇ. 49ರಷ್ಟು ಜನರು ಆಹಾರವನ್ನು ಖರೀದಿಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next