Advertisement

ನಿಯಮ ಪಾಲಿಸದ ಅಂಗಡಿ, ಗ್ರಾಹಕರ ವಿರುದ್ಧ ಕ್ರಮ

03:56 PM May 20, 2021 | Adarsha |

ವಿಜಯಪುರ:ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಅನಗತ್ಯ ಅಂಗಡಿ ಮುಂಗಟ್ಟುಗಳು ತೆರೆಯುತ್ತಿರುವ ಬಗ್ಗೆ ಹಾಗೂ ಬೆಳಗಿನ ಸಮಯದಲ್ಲಿ ಜನದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂತರಕಾಯ್ದುಕೊಳ್ಳದೆ ಜನಜಂಗುಳಿಸೇರುತ್ತಿದ್ದರ ಬಗ್ಗೆಉದಯವಾಣಿಯಲ್ಲಿ ಮೇ 18 ರಂದುವರದಿ ಬಂದಿದ್ದು, ಮೇ 19ರ ಬೆಳ್ಳಂ ಬೆಳಗ್ಗೆ ಪೊಲೀಸ್‌ ಸಿಬ್ಬಂದಿ ಮತ್ತುಪುರಸಭಾ ಅಧಿಕಾರಿಗಳು ರಸ್ತೆಗಿಳಿದು ಕಾರ್ಯಚರಣೆ ಮಾಡಿದರು.

Advertisement

ದಿನಸಿ, ಹಾಲು, ತರಕಾರಿ ಹಾಗೂಇನ್ನಿತರೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ತೆರವಾಗಿದ್ದ ಫ್ಯಾನ್ಸಿ ಸ್ಟೋರ್‌, ಚಪ್ಪಲಿ ಅಂಗಡಿ, ಜ್ಯುವೆಲ್ಲರಿ ಶಾಪ್‌, ಬಟ್ಟೆ ಅಂಗಡಿಮತ್ತಿತರೆ ಅಂಗಡಿಗಳನ್ನು ಬಂದ್‌ಮಾಡಿಸಿದರು. ಅಂಗಡಿ ಮಾಲೀಕರು ಅಂಗಡಿ ತೆರೆಯಬಾರದು ಎಂಬ ವಿಷಯ ಗೊತ್ತಿರಲಿಲ್ಲ. ಬೇರೆಯವರೆಲ್ಲಾ ಅಂಗಡಿತೆರೆದು ವ್ಯಾಪಾರ ಮಾಡುತ್ತಿರುವುದು ನೋಡಿ, ನಾವು ಒಬ್ಬೊಬ್ಬರಾಗೇ ಅಂಗಡಿ ತೆರೆಯುತ್ತಿರುವುದಾಗಿ ತಿಳಿಸಿದರು.ಅಂಗಡಿ ತೆರೆದಿದ್ದರಿಂದಲೇ ವ್ಯಾಪಾರಕ್ಕೆಬಂದೆವು ಎಂದು ಸಾರ್ವಜನಿಕರು ಸಮಜಾಯಿಷಿ ನೀಡಿದರು.

ಗಸ್ತು ತಿರುಗಿ,ಅನಗತ್ಯವಾಗಿ ತೆರೆದಿದ್ದ ಎಲ್ಲಾ ಅಂಗಡಿಗಳನ್ನುಮುಚ್ಚಲು ಸೂಚನೆನೀಡಿದ್ದೇವೆ. ಅಂಗಡಿಮಾಲೀಕರು ನಾಳೆಯಿಂದ ಅಂಗಡಿ ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಅಗತ್ಯವಸ್ತುಗಳುಹೊರತು ಪಡಿಸಿ ಬೇರೆ ಅಂಗಡಿಗಳನ್ನುತೆರೆದರೆ ತೆರೆದರೆ,ಕ್ರಮಕೈಗೊಳ್ಳುತ್ತೇವೆ.

 ನಂದೀಶ್‌, ಪಿಎಸ್‌ಐ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next