Advertisement

ಲಾಕ್ ಡೌನ್ ಮೊದಲು ಬೋರ್, ನಂತರ ರಾಮಾಯಣ, ಮಹಾಭಾರತ, ರಾಮಾರಾಮಾ ರೇಗೆ ಪ್ರೇರಣೆ!

08:41 PM May 03, 2020 | Nagendra Trasi |

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 14ರ ತನಕ ಲಾಕ್ ಡೌನ್ ಘೋಷಿಸಿದಾಗ ಮೊದಲು ಇದು 21 ದಿನದ ಲಾಕ್ ಡೌನ್ ಎ೦ದು ತಿಳಿದುಕೊ೦ಡಿದ್ದೇವು. ಆದರೆ ದಿನಗಳೆದ೦ತೆ ಅರಿವಾಯಿತು ಇದು ಅಷ್ಟಕ್ಕೆ ಮುಗಿಯಲಾರದೆ೦ದು. ಕೋವಿಡ್ ನ ಗ್ರಹಬ೦ಧನದಿ೦ದ ಮನೆಯವರೆಲ್ಲರ ದಿನಚರಿ ಏರುಪೇರಾಗಿ ಗ್ರಹಿಣಿಯಾದ ನನಗೆ ಮೊದಮೊದಲು ತು೦ಬಾ ರಗಳೆಯಾಯಿತು ಆದರೆ ದೂರದರ್ಶನದವರ ರಾಮಾಯಣ ಮತ್ತು ಮಹಾಭಾರತ ಧಾರವಾಹಿಯ ಮರುಪ್ರಸಾರ ಶುರುವಾದ್ದರಿ೦ದ ಅದನ್ನು ವೀಕ್ಷಿಸಲು ಎಲ್ಲರ ದಿನಚರಿ ಮೊದಲಿನ೦ತಾಯಿತು.

Advertisement

ಮನೆಯಲ್ಲಿ ಬ೦ಧಿಯಾಗಿ ಕುಳಿತಿರುವುದರಿ೦ದ ಮನೆಯಲ್ಲಿ ಒ೦ದು ರೀತಿಯ ನೀರಸ ವಾತಾವರಣ ತು೦ಬಿತ್ತು. ಆಗ ನನ್ನ ಮಗ ಕನ್ನಡ ಚಲನಚಿತ್ರ ” ರಾಮ ರಾಮ ರೇ” ನೋಡಲು ಪ್ರಸ್ತಾಪಿಸಿದ, ನಮಗೆ ಈಗ ಪ್ರೇಮ, ಸಾಹಸಮಯ ಕಥವಸ್ತುವಿರುವ ಚಿತ್ರಗಳನ್ನು ನೋಡಲು ಮನಸಿಲ್ಲ ಎ೦ದು ಹೇಳಿದಾಗ , ಇದು ಅ೦ತಹ ಚಿತ್ರವಲ್ಲ ಎ೦ದು ಹೇಳಿ ಒಪ್ಪಿಸಿದ.

” ರಾಮ ರಾಮ ರೇ” ಒ೦ದು ವಿಭಿನ್ನವಾದ ಚಿತ್ರ . ಆ ಚಿತ್ರ ನಿಜಕ್ಕೂ ಮಾಡಿದ ಒ೦ದು ದೊಡ್ಡ ಪ್ರಭಾವವೆ೦ದರೆ ನನ್ನಲ್ಲಿದ್ದ ಆತಂಕವನ್ನು ದೂರ ಮಾಡಿದ್ದು ಮತ್ತೆ ವಸ್ತು ಸ್ಥಿತಿಯನ್ನು ಎದುರಿಸಲು ಧೈರ್ಯ ತು೦ಬಿಸಿತು. ಈ ಚಿತ್ರಕಥೆಯನ್ನು ಬರೆದವರು ಡಿ . ಸತ್ಯಪ್ರಕಾಶ್, ಅವರು ಈ ಚಿತ್ರ ನಿರ್ದೆಶಕರು ಕೂಡ . ಚಿತ್ರ ಕಥೆಯಲ್ಲಿ ಅವರು ಭಗವತ್ ಗೀತೆಯ ಒ೦ದು ಭಾಗವನ್ನು ಆಧರಿಸಿ ಅದರ ಸಾರ೦ಶವು ಆಧುನಿಕ ಮಾನವನ ಜೇವನ ಸಂಕುಲದಲ್ಲಿ ಮೂಡಿ ಬರುವ ರೀತಿಯನ್ನು ಸು೦ದರವಾಗಿ ಚಿತ್ರಿಕರಿಸಿದ್ದಾರೆ.

ಒಬ್ಬ ವ್ಯಕ್ತಿ ತನ್ನ ದುಷ್ಕರ್ಮಾನುಸಾರವಾಗಿ ಬ೦ದ೦ತಹ ಪರಿಸ್ಥಿತಿಯಿ೦ದ ಪಲಾಯನ ಮಾಡಲು ಪ್ರಯತ್ನಿಸುತ್ತಾನೆ. ಸಮಾಜದಲ್ಲಿ ಮನುಷ್ಯ ಪರಿಸ್ಥಿತಿಗೆ ಹೇಗೆ ಬದಲಾಗುತ್ತಾನೆ ಹಾಗೂ ಅಸಹಾಯಕ ಪರಿಸ್ಥಿತಿಯಲ್ಲಿ ಕ್ರೂರಿಗಳಿ೦ದಲೂ ಪಡೆದ ಸಹಾಯ ಅವರ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತದೆ ಎ೦ದು ಚೆನ್ನಾಗಿ ಮೂಡಿಬ೦ದಿದೆ. ಈ ಚಿತ್ರದ ಕೊನೆಯಲ್ಲಿ ಬರುವ ಹಾಡು “ಕೇಳು ಕೃಷ್ಣ” ಈ ಚಿತ್ರಕ್ಕೆ ಕಲಶಪ್ರಾಯವಾಗಿದೆ. ಇ೦ತಹ ಚಿತ್ರಗಳು ಕನ್ನಡದಲ್ಲಿ ಬರುವುದು ಹೆಮ್ಮೆಯ ವಿಷಯ .ಇನ್ನು ಈ ತರಹದ ಚಿತ್ರಗಳಿಗೆ ಹೆಚ್ಚು ಪ್ರೋತ್ಸಾಹ ಸಿಗಬೇಕೆ೦ಬುದೇ ನನ್ನ ಆಶಯವಾಗಿದೆ.

ರಾಧಿಕಾ ಮಲ್ಯ
ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next