Advertisement

ಠೇವಣಿ ವಾರಸುದಾರರ ಪತ್ತೆ: ಜೂ. 1ರಿಂದ ಆರ್‌ಬಿಐ ಅಭಿಯಾನ

12:11 AM May 13, 2023 | Team Udayavani |

ಮುಂಬಯಿ: ವಾರಸುದಾರರಿಲ್ಲದೆ ಬ್ಯಾಂಕ್‌ಗಳಲ್ಲೇ ಉಳಿದಿರುವ ಠೇವಣಿಗಳನ್ನು ಪತ್ತೆಹಚ್ಚಿ, ವಾರಸುದಾರರಿಗೆ ಪಾವತಿಸುವ ವಿಶೇಷ ಶತದಿನಗಳ ಅಭಿಯಾನ ಜೂ. 1ರಿಂದ ಆರಂಭವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

Advertisement

ದೇಶದ ಎಲ್ಲ ಜಿಲ್ಲೆಗಳಲ್ಲೂ ಈ ಅಭಿಯಾನ ನಡೆಯಲಿದೆ. 10 ವರ್ಷಗಳಲ್ಲಿ ವಹಿವಾಟು ನಡೆಯದೆ ಇರುವಂಥ ಉಳಿತಾಯ/ಚಾಲ್ತಿ ಖಾತೆಗಳು, ಮೆಚೂರಿಟಿ ಅವಧಿ ಮುಗಿದು 10 ವರ್ಷಗಳಾದರೂ ವಿತ್‌ಡ್ರಾ ಮಾಡದೆ ಇರುವ ನಿಶ್ಚಿತ ಠೇವಣಿ ಖಾತೆಗಳಲ್ಲಿರುವ ಮೊತ್ತವನ್ನು “ಕ್ಲೇಮು ಮಾಡದ ಠೇವಣಿ” ಎಂದು ಪರಿಗಣಿಸಲಾಗುತ್ತದೆ. ಈ ಮೊತ್ತವನ್ನು ಬ್ಯಾಂಕ್‌ಗಳು “ಡೆಪಾಸಿಟರ್‌ ಎಜುಕೇಶನ್‌ ಆ್ಯಂಡ್‌ ಅವೇರ್‌ನೆಸ್‌ ಫ‌ಂಡ್‌’ಗೆ ವರ್ಗಾಯಿಸಿವೆ. ಶುಕ್ರವಾರ ಆರ್‌ಬಿಐ ಈ ಮೊತ್ತಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸುವ ನಿಟ್ಟಿನಲ್ಲಿ “100 ದಿನಗಳು, 100 ಪಾವತಿ” ಎಂಬ ಅಭಿಯಾನ ಆರಂಭಿಸುವ ಬಗ್ಗೆ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next