Advertisement

ಸ್ಥಳೀಯ ಸಂಸ್ಥೆ: ಮೂರು ಪಕ್ಷಕ್ಕೂ ಅಧಿಕಾರ

03:42 PM Nov 11, 2020 | Suhan S |

ರಾಮನಗರ: ಜಿಲ್ಲೆಯ 2 ಪುರಸಭೆ ಮತ್ತು1ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಮುಗಿದಿದೆ. ಮಾಗಡಿಯಲ್ಲಿ ಬಿಜೆಪಿ ಟಿಕೆಟ್‌ನಿಂದ ಒಬ್ಬರೇ ಒಬ್ಬ ಸದಸ್ಯೆ ಜೆಡಿಎಸ್‌ ಬೆಂಬಲದಿಂದ ಅಧ್ಯಕ್ಷ ಸ್ಥಾನ ಲಭಿಸಿದೆ.

Advertisement

ಬಿಡದಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಸದಸ್ಯರ ಬೆಂಬಲದಲ್ಲಿ ಜೆಡಿಎಸ್‌ ಅಧಿಕಾರಮುಂದುವರಿಸಿದೆ. ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಪತ್ಯ ಸ್ಥಾಪಿಸಿದ್ದು, ಅಧಿಕಾರ ಹಿಡಿದಿದೆ.

ಮಾಗಡಿಯಲ್ಲಿ ರೋಚಕ ರಾಜಕೀಯ!: ಒಟ್ಟು 23 ಸದಸ್ಯ ಬಲದ ಮಾಗಡಿ ಪುರಸಭೆಯಲ್ಲಿ 12 ಜೆಡಿ ಎಸ್‌, 10 ಕಾಂಗ್ರೆಸ್‌ ಮತ್ತು ಒಬ್ಬರು ಬಿಜೆಪಿ ಸದಸ್ಯರಿದ್ದಾರೆ. 2019ರ ನವೆಂಬರ್‌ನಲ್ಲಿ ಇವರು ಪುರಸಭೆಯ ಸದಸ್ಯರಾಗಿ ಜನರಿಂದ ಆಯ್ಕೆಯಾಗಿದ್ದರು. ಆದರೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ 2020ರ ನವೆಂಬರ್‌ 9ರಂದು ನಡೆದು ರೋಚಕ ರಾಜಕೀಯಕ್ಕೆ ದಾರಿ ಮಾಡಿಕೊಟ್ಟಿದೆ.

ಹೇಗಾದರು ಮಾಡಿ ಅಧಿಕಾರ ಹಿಡಿಯಬೇಕು ಎನ್ನುವುದು ಕಾಂಗ್ರೆಸ್‌ನ ಬಯಕೆಯಾಗಿತ್ತು. ಬಿಜೆಪಿಯ ಏಕೈಕ ಸದಸ್ಯರೊಂದಿಗೆ ಅಧಿಕಾರ ಹಿಡಿಯಲು ಬಯಸಿದ ಕಾಂಗ್ರೆಸ್‌ಗೆ ಸಂಖ್ಯಾಬಲದ ಕೊರತೆ ಇತ್ತು. ಜೆಡಿ ಎಸ್‌ ಸದಸ್ಯರಿಗೆ ಗಾಳ ಹಾಕಿದ್ದು ಉಪಯೋಗವಾಗಲಿಲ್ಲ. ಈ ಮಧ್ಯೆ ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್‌ ಪಾಳಯದಿಂದ ಇಬ್ಬರು ಸದಸ್ಯರು ಬಿಜೆಪಿ ಕಡೆ ವಾಲಿ ದರು. ಇದು ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಮಗೆ ಅಧ್ಯಕ್ಷ ಸ್ಥಾನ ಕೊಡುವ ಪಕ್ಷದೊಂದಿಗೆ ಹೆಜ್ಜೆ ಹಾಕಲು ಸಿದ್ಧ ಎಂದು ಮಾಗಡಿಯ ಬಿಜೆಪಿ ಮುಖಂಡರ ಅಭಿಪ್ರಾಯ ಎರಡೂ ಪಕ್ಷಗಳಿಗೆ ರವಾನೆಯಾಯಿತು.

ಈ ಅಭಿಪ್ರಾಯ ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಸಂಸದ ಡಿ.ಕೆ.ಸು ರೇಶ್‌ ಅವರ ಕಿವಿ ತಲುಪಿತು. ಈ ಮಧ್ಯೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವ ಥನಾರಾಯಣ ಮತ್ತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಡುವೆ ಮಾತುಕತೆಯಾಗಿದೆ ಎಂಬಮಾಹಿತಿ ಇದೆ. ಮಾಗಡಿ ಪಟ್ಟಣದ ಅಭಿವೃದ್ಧಿಗೆ ಅನುದಾನ ಬಿಡುಗಡೆ ವಿಚಾರದಲ್ಲಿ ಡಿಸಿಎಂ ಡಾ.ಸಿ.ಎನ್‌ ಅಶ್ವಥನಾರಾಯಣ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

Advertisement

ಜೆಡಿಎಸ್‌-ಬಿಜೆಪಿ ಮೈತ್ರಿಯ ಸೂಕ್ಷ್ಮವರಿತ ಕಾಂಗ್ರೆಸ್‌ ಅಭ್ಯರ್ಥಿಗಳು ತಮ್ಮ ನಾಮ ಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿ ರಹಮತ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೇರಲು ಅಗತ್ಯ ಸಂಖ್ಯೆ ಇದ್ದರೂ ಜೆಡಿಎಸ್‌ ಸದಸ್ಯರು ಒಗ್ಗಟ್ಟು ಪ್ರದರ್ಶಿಸಲು ವಿಫ‌ಲರಾಗುತ್ತಿದ್ದರು. ಈ ಮುಖಭಂಗ ತಪ್ಪಿಸಿಕೊಳ್ಳಲು ಜೆಡಿಎಸ್‌ ಅನಿವಾರ್ಯವಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ.

ಬಿಡದಿ ಪುರಸಭೆ:ಜೆ ಡಿಎಸ್‌ಗೆ ಅಧಿಕಾರ: ಬಿಡದಿ ಪುರಸಭೆ ಕಾಂಗ್ರೆಸ್‌ ಸದಸ್ಯರ ಬೆಂಬಲದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಿಡದಿ ಪುರಸಭೆ 23 ಸದಸ್ಯರ ಬಲವಿದೆ. ಜೆಡಿ ಎಸ್‌ 12 ಮತ್ತು ಕಾಂಗ್ರೆಸ್‌ 11 ಸದಸ್ಯರಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿದ್ದ ಎಚ್‌.

ಸಿ.ಬಾಲಕೃಷ್ಣ ಕಾಂಗ್ರೆಸ್‌ ಪಕ್ಷಕ್ಕೆ, ಕಾಂಗ್ರೆಸ್‌ನಲ್ಲಿದ್ದ ಎ. ಮಂಜುನಾಥ್‌ ಜೆಡಿಎಸ್‌ ಪಕ್ಷಕ್ಕೆ ಜಿಗಿದಿದ್ದರಿಂದ ಬಿಡದಿ ಪುರಸಭೆಯಲ್ಲಿದ್ದ ಈ ಇಬ್ಬರು ನಾಯಕರ ಬೆಂಬಲಿಗರೂ ಸಹ ತಮ್ಮ ಪಕ್ಷ ನಿಷ್ಠೆ ಬದಲಿಸಿದ್ದಾರೆ. ಜೆಡಿಎಸ್‌ನಲ್ಲಿರುವ 12 ಸದಸ್ಯರ ಪೈಕಿ 3 ಮಂದಿ ಕಾಂಗ್ರೆಸ್‌ನೊಂದಿಗೆ ಮತ್ತು 11 ಕಾಂಗ್ರೆಸ್‌ ಸದಸ್ಯರ ಪೈಕಿ6 ಮಂದಿ ಜೆಡಿಎಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.

ಹೀಗಾಗಿ ನವೆಂಬರ್‌ 5ರಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಚಿಹ್ನೆಯಲ್ಲಿ ಗೆದ್ದ ಸದಸ್ಯರ ಬೆಂಬಲದಲ್ಲಿ ಅಧಿಕಾರ ಹಿಡಿದಿದೆ. ಅಧ್ಯಕರಾ‌Ò ಗಿ ಜೆಡಿಎಸ್‌ನ  ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ಕಾಂಗ್ರೆಸ್‌ ಅಭ್ಯರ್ಥಿ ಸಿ.ಲೋಕೇಶ್‌ ಆಯ್ಕೆಯಾಗಿದ್ದಾರೆ.

ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಕನಕಪುರ ನಗರಸಭೆಯಲ್ಲಿ ಯಾವ ರಾಜಕೀಯಗೊಂದಲಗಳಿಗೂ ಅವಕಾಶವಾಗಲಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ನಿಚ್ಚಳ ಬಹುಮತ ಇರುವುದರಿಂದ ಇಲ್ಲಿ ಯಾವ ರಾಜಕೀಯ ಮೇಲಾಟಗಳು ಸಾಧ್ಯವಾಗಿಲ್ಲ. ಒಟ್ಟು 31 ವಾರ್ಡುಗಳಿರುವ ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್‌ನ 26 ಸದಸ್ಯರು, ಜೆಡಿಎಸ್‌ನ 4 ಮತ್ತು ಬಿಜೆಪಿಯ1 ಸದಸ್ಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next