Advertisement

ಕಾಂಗ್ರೆಸ್‌ನ ಮಾತು ಕೇಳಿ ನಖರಾ ಮಾಡಿದ್ರೆ ಜೋಕೆ

11:25 PM Jan 03, 2020 | Lakshmi GovindaRaj |

ಬಳ್ಳಾರಿ: “ಇದು ನಮ್ಮ ದೇಶ..ಇಲ್ಲಿ ಶೇ.80ರಷ್ಟು ನಾವಿದ್ದೇವೆ. ಕಾಂಗ್ರೆಸ್‌ನ ಬೇಕೂಫ್‌ಗಳು ಹೇಳುವುದನ್ನು ಕೇಳಿ ನೀವು ಬೀದಿಗೆ ಬಂದರೆ ಎಚ್ಚರ..ಶೇ.80ರಷ್ಟು ಇರುವ ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನು..?’ – ಇದು ಎನ್‌ಆರ್‌ಸಿ, ಸಿಎಎ ಕಾಯ್ದೆ ವಿರೋಧಿಗಳಿಗೆ ಶಾಸಕ ಸೋಮಶೇಖರ ರೆಡ್ಡಿ ನೀಡಿದ ಎಚ್ಚರಿಕೆ. ನಗರದಲ್ಲಿ ಶುಕ್ರವಾರ ದೇಶಭಕ್ತ ನಾಗರಿಕ ವೇದಿಕೆ ಎನ್‌ಆರ್‌ಸಿ, ಸಿಎಎ ಕಾಯ್ದೆ ಬೆಂಬಲಿಸಿ ಆಯೋಜಿಸಿದ್ದ ಬೃಹತ್‌ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.

Advertisement

ಹಿಂದೂಗಳು ಎಂದರೆ ಬಂಧುಗಳು ಎನ್ನುತ್ತಲೇ ಮಾತು ಆರಂಭಿಸಿದ ಅವರು, ಸಿಎಎ ವಿರೋಧಿಸುತ್ತಿರುವವರಿಗೆ ಇದು ಎಚ್ಚರಿಕೆ. ಇಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಬಂದಿದ್ದಾರೆ. ಇನ್ನು ಶೇ.100ರಷ್ಟು ಜನರು ಬಂದರೆ ಹೇಗಿರುತ್ತದೆ. ಅದಕ್ಕೆ ಜಾಸ್ತಿ ನಖರಾ ಮಾಡಿದರೆ ನಿಮ್ಮ ಪರಿಸ್ಥಿತಿ ಏನಾಗಲಿದೆ ಎಂದು ಯೋಚಿಸಿ ಎಂದು ಕಾಯ್ದೆ ವಿರೋಧಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು.

ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್‌ಆರ್‌ಸಿಯಿಂದ ಯಾರಿಗೂ ಸಮಸ್ಯೆಯಾಗಲ್ಲ. ಒಂದು ವೇಳೆ ನಿಮಗೆ ಹೋಗಬೇಕೆಂದು ಅನಿಸಿದರೆ ನೀವೆಲ್ಲ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋಗಬಹುದು. ಇಲ್ಲಿ ನಾವು-ನೀವೆಲ್ಲರೂ ಅಣ್ಣ-ತಮ್ಮಂದಿರ ಥರ ಇದ್ದೇವೆ. ಅದು ಹಾಗೆ ಇರಬೇಕು. ಅದನ್ನು ಬಿಟ್ಟು ಕಾಯ್ದೆಯನ್ನು ವಿರೋ ಧಿಸಿದರೆ ಒಬ್ಬೊಬ್ಬರು ಒಬ್ಬೊಬ್ಬ ಶಿವಾಜಿಯಾಗಿ ಕನಕದುರ್ಗಮ್ಮನ ದರ್ಶನ ಪಡೆದು ಖಡ್ಗ ಹಿಡಿದು ನಿಂತರೆ ಹೇಗೆ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next