Advertisement

ನಾಡಗೀತೆ 1 ನಿಮಿಷಕ್ಕೆ ಸಿಮೀತಗೊಳಿಸಿ : ಸಿಎಂ ಬಳಿ ಕಮಲಾ ಹಂಪನಾ ಮನವಿ

07:02 PM Aug 26, 2022 | Team Udayavani |

ಬೆಂಗಳೂರು: ಸರ್ಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ನಾಡಗೀತೆಯನ್ನು ಇಟ್ಟುಕೊಂಡು ಅದನ್ನು 1ನಿಮಿಷಕ್ಕೆ ಸಿಮೀತಗೊಳಿಸಬೇಕು ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.

Advertisement

ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಪರಿಷತ್ತಿನ ಶ್ರೀಕೃಷ್ಣ ಪರಿಷತ್ ಮಂದಿರದ ನವೀಕರಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಲವು ರಾಷ್ಟ್ರಗಳ ನಾಡಗೀತೆ 1 ನಿಮಿಷಕ್ಕೆ ಸೀಮಿತವಾಗಿದೆ. ಅದೇ ರೀತಿಯಲ್ಲಿ ನಮ್ಮ ನಾಡಗೀತೆಯನ್ನು 1 ನಿಮಿಷಕ್ಕೆ ಸೀಮಿತ ಮಾಡಬೇಕು .ಹಾಗೂ ಮೈಸೂರು ಅನಂತಸ್ವಾಮಿ ಅವರು 3 ಚರಣಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ ಅದನ್ನು ಇಟ್ಟುಕೊಳ್ಳಬೇಕು.ಇದನ್ನು ನಾನು ಕುವೆಂಪು ಅವರ ಶಿಷ್ಯೆಯಾಗಿ ಹೇಳುತ್ತಿದ್ದೇನೆ ಎಂದರು.

ಈಗಾಗಲೇ ಚಾಮರಾಜಪೇಟೆಯ ಸರ್ಕಾರಿ ಶಾಲೆಯ ಜಾಗ ಖಾಸಗಿ ಅವರ ಪಾಲಾಗುತ್ತಿದೆ ಎಂಬ ಸುದ್ದಿ ಬೇಸರ ಮಾಡಿಸಿತು.ಈ ಸರ್ಕಾರಿ ಶಾಲೆಯನ್ನು ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಉಳಿಸಬೇಕು.ಕನ್ನಡ ಶಾಲೆಗಳ ಬೆಳವಣಿಗೆ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next