Advertisement

Congress ಚುನಾವಣೆಗೂ ಮುನ್ನವೇ 1 ಸೀಟು ನಷ್ಟ; ನಾಮಪತ್ರ ತಿರಸ್ಕೃತ !

12:06 AM Apr 22, 2024 | Team Udayavani |

ಗಾಂಧಿನಗರ: ಗುಜರಾತ್‌ನ ಸೂರತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್‌ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಅಲ್ಲದೆ ಬದಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುರೇಶ್‌ ಪಡಸಾಲ ಅವರ ಅರ್ಜಿಯೂ ತಿರಸ್ಕೃತಗೊಂಡಿದ್ದು, ಸೂರತ್‌ನಲ್ಲಿ ಕಾಂಗ್ರೆಸ್‌ ಸ್ಪರ್ಧೆಯಿಂದ ಹೊರ ಗುಳಿಯುವಂತಾಗಿದೆ.

Advertisement

ನಾಮಪತ್ರ ಸಲ್ಲಿಕೆ ವೇಳೆ ಅನುಮೋದಕರಾಗಿ ಸಹಿ ಮಾಡಿದ್ದರೆನ್ನಲಾದ ಮೂವರು ವ್ಯಕ್ತಿಗಳು, ತಾವು ಸಹಿಯನ್ನೇ ಮಾಡಿಲ್ಲವೆಂದು ಜಿಲ್ಲಾ ಚುನಾವಣಾ ಧಿಕಾರಿಗಳಿಗೆ ಅಫಿದವಿತ್‌ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. “ಪರಿಶೀಲನೆ ವೇಳೆ ಪ್ರಾಥಮಿಕ ನೋಟದಲ್ಲಿಯೇ ಅನುಮೋದಕರ ಸಹಿಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅಲ್ಲದೇ ನಾಮಪತ್ರಗಳಲ್ಲಿ ಇರುವ ಸಹಿಗಳು ತಮ್ಮದಲ್ಲ ಎಂದು ಸಂಬಂಧಿಸಿದವರು ಅಫಿದವಿತ್‌ ಸಲ್ಲಿಸಿದ್ದಾರೆ. ಹಾಗಾಗಿ ಕಾನೂನು ಬದ್ಧವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಹೈಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ಸಿದ್ಧತೆ: ಬಿಜೆಪಿ ಸೂಚನೆ ಮೇರೆಗೆ ಚುನಾವಣಾಧಿಕಾರಿಗಳು ನಮ್ಮ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಜತೆಗೆ ಈ ರೀತಿ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ನಾವು ಹೈಕೋರ್ಟ್‌ ಮೊರೆ ಹೋಗಲಿದ್ದೇವೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next