Advertisement

Sandeshkhali ಪ್ರಕರಣ ಶೇ.1 ನಿಜ ಆದ್ರೂ ಅದು ನಾಚಿಕೆಗೇಡು: ಹೈಕೋರ್ಟ್‌

01:31 AM Apr 05, 2024 | Team Udayavani |

ಕೋಲ್ಕತಾ: ಸಂದೇಶ್‌ಖಾಲಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತಾ ಹೈಕೋರ್ಟ್‌ ಗುರು ವಾರ ಪಶ್ಚಿಮ ಬಂಗಾಲದ ಟಿಎಂಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣ ಸಂಬಂಧ ಅಫಿದವಿತ್‌ಗಳ ವಿಚಾರಣೆ ವೇಳೆ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮುಖ್ಯ ನ್ಯಾ| ಟಿ.ಎಸ್‌.ಶಿವಜ್ಞಾನಂ, “ಈ ಅಫಿದವಿತ್‌ಗಳ ಪೈಕಿ 1 ಸತ್ಯ  ವಾದರೂ, ಆರೋಪಗಳ ಪೈಕಿ ಶೇ.1ರಷ್ಟು ಸತ್ಯವಾದರೂ, ಅದು ನಾಚಿಕೆಗೇಡಿನ ವಿಚಾರ. ಪಶ್ಚಿಮ ಬಂಗಾಲವು ಮಹಿಳೆಯರಿಗೆ ಸುರಕ್ಷಿತ ವಾಗಿದೆ ಎಂದು ನೀವು ಹೇಳುತ್ತೀರಲ್ಲ? ಇಲ್ಲಿ ಕೇಳಿಬಂದಿರುವ ಆರೋಪಗಳಲ್ಲಿ ಒಂದು ನಿಜವಾದರೂ ನಿಮ್ಮ ಈ ಘೋಷಣೆಗಳೆಲ್ಲ ಸುಳ್ಳೆಂದು ಸಾಬೀತಾಗುತ್ತವೆ’ ಎಂದರು. ಇದೇ ವೇಳೆ ಆರೋಪಿ ಶೇಖ್‌ ಶಹಜಹಾನ್‌ಗೂ ಹೈಕೋರ್ಟ್‌ ಚಾಟಿ ಬೀಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next