Advertisement

ಬಿಹಾರ, ಜಾರ್ಖಂಡ್, ಉತ್ತರಪ್ರದೇಶ; ಒಂದೇ ದಿನ ಸಿಡಿಲು ಬಡಿದು 70ಕ್ಕೂ ಅಧಿಕ ಸಾವು

08:29 AM Jul 26, 2019 | Team Udayavani |

ಪಾಟ್ನಾ: ಬಿಹಾರ, ಜಾರ್ಖಂಡ್ ಹಾಗೂ ಉತ್ತರಪ್ರದೇಶದಲ್ಲಿ ಕಳೆದ 24ಗಂಟೆಗಳಲ್ಲಿ ಸಿಡಿಲು ಬಡಿದು 73 ಮಂದಿ ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ಸಿಡಿಲು ಬಡಿದು ಬಿಹಾರದಲ್ಲಿ 39 ಮಂದಿ, ಜಾರ್ಖಂಡ್ ನಲ್ಲಿ 28 ಹಾಗೂ ಉತ್ತರಪ್ರದೇಶದಲ್ಲಿ ಆರು ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಜಾರ್ಖಂಡ್ ನ ಜಾಮಾತ್ರಾ ಮತ್ತು ಲಾಟೇಹಾರ್ ನಲ್ಲಿ ತಲಾ ಆರು ಮಂದಿ, ಚಾತ್ರಾದಲ್ಲಿ ನಾಲ್ಕು, ಗ್ರಾವಾದಲ್ಲಿ ಮೂರು, ಡುಮ್ಕಾದಲ್ಲಿ ಮೂರು ಮಂದಿ, ಗಿರಿಧಿಹ್ ನಲ್ಲಿ ಇಬ್ಬರು, ಪಾಕುರ್ ನಲ್ಲಿ ಇಬ್ಬರು, ಧನ್ಬಾದ್ ನಲ್ಲಿ ಒಬ್ಬರು, ದಿಯೋಗಢ್ ನಲ್ಲಿ ಒಬ್ಬರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಸಿಡಿಲಾಘಾತಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ. ಸಿಡಿಲು ಬಡಿದು ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಜಾರ್ಖಂಡ್ ಮತ್ತು ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next