Advertisement

Vijayapura; ಮದುವೆಗೆ ನಿರಾಕರಣೆ, ಯುವತಿ ಹಂತಕನಿಗೆ ಜೀವಾವಧಿ ಶಿಕ್ಷೆ

10:11 AM Oct 01, 2023 | Team Udayavani |

ವಿಜಯಪುರ: ಉದ್ಯೋಗ ಇಲ್ಲದ ತನಗೆ ಮದುವೆ ಮಾಡಿಕೊಳ್ಳಲು ಮಗಳನ್ನು ಕೊಡಲು ಪಾಲಕರು ಒಪ್ಪಲಿಲ್ಲವೆಂದು ಸಿಟ್ಟಿಗೆದ್ದು, ಯುವತಿಯನ್ನು ಹತ್ಯೆ ಮಾಡಿದ ಆರೋಪಿಗೆ ವಿಜಯಪುರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಇಂಡಿ ತಾಲೂಕಿನ ಬುಯ್ಯಾರ ಗ್ರಾಮದ ವಿಶ್ವೇಶ್ವರಯ್ಯ ಹಿರೇಮಠ ಎಂಬವನೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಂತಕ. ಈತ ಅದೇ ಗ್ರಾಮದ ಶಿವರುದ್ರಯ್ಯ ಹಿರೇಮಠ ಎಂಬವರ ಮಗಳು ದಾನಮ್ಮ ಎಂಬಾಕೆಯನ್ನು ಮದುವೆ ಮಾಡಿಕೊಡುವಂತೆ ತನ್ನ ತಾಯಿ ಗುರುಲಿಂಗವ್ವಳ ಮೂಲಕ ಕೇಳಿದ್ದ.

ಇದಕ್ಕೆ ದಾನಮ್ಮಳ ತಾಯಿ ಅನ್ನಪೂರ್ಣ, ವಿಶ್ವೇಶ್ವರಯ್ಯ ಉದ್ಯೋಗ ಇಲ್ಲದ ಕಾರಣ ಆತನಿಗೆ ತನ್ನ ಮಗಳನ್ನು ಕೊಡುವುದಿಲ್ಲ ಎಂದು ನಿರಾಕರಿಸಿದ್ದಳು. ಇದರಿಂದ ಸಿಟ್ಟಾದ ವಿಶ್ವೇಶ್ವರಯ್ಯ 2021 ಆಗಸ್ಟ್ 16 ರಂದು ಯುವತಿ ದಾನಮ್ಮಳನ್ನು ಹತ್ಯೆ ಮಾಡಿದ್ದ.

ಈ ಕುರಿತು ಶಿವರುದ್ರಯ್ಯ ಇಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೋಡು, ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ ತನಿಖೆಯ ಬಳಿಕ ಸಿಪಿಐ ರಾಜಶೇಖರ ಬಡದೇಸಾರ ಸಾಕ್ಷಾಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರಪ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ:Body Health: ಸಿಹಿ, ಹುಳಿ, ಕಹಿ, ಉಪ್ಪು , ಉಮಾಮಿ: ಬಾಯಿ ರುಚಿ ದೇಹಾರೋಗ್ಯ ಸೂಚಕವೇ?

Advertisement

ಪ್ರಕರಣದ ವಿಚಾರಣೆ ನಡೆಸಿದ ವಾದ-ವಿವಾದ ಪರಿಶೀಲಿಸಿ, ಸಾಕ್ಷಿ-ಪುರಾವೆಗಳನ್ನು ಪರಿಗಣಿಸಿದ ವಿಜಯಪುರದ 1ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಭಾಶ ಸಂಕದ ಹಂತದ ವಿಶ್ವೇಶರಯ್ಯ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇನ್ನೊಂದು ಅಪರಾಧಕ್ಕೆ 1 ವರ್ಷ ಶಿಕ್ಷೆ ಸೇರಿದಂತೆ ಒಟ್ಟು 26 ಸಾವಿರ ರೂ. ದಂಡ ವಿಧಿಸಿದ್ದಾರೆ.

ಅಲ್ಲದೇ ಮೃತಳ ಹೆತ್ತವರಿಗೆ ಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಸೂಕ್ತ ಪರಿಹಾರ ಕೊಡಿಸುವಂತೆಯೂ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ 1ನೇ ಅಧಿಕ ಸರ್ಕಾರಿ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next