Advertisement

ಸೇವಾ ವಿಭಾಗ ಹಸ್ತಾಂತರಿಸದ ಎಲ್‌ಜಿ: ಸಿಎಂ ಕೇಜ್ರಿವಾಲ್‌ ಆರೋಪ

05:29 PM Jul 06, 2018 | udayavani editorial |

ಹೊಸದಿಲ್ಲಿ : ಸೇವಾ ವಿಭಾಗದ ಮೇಲಿನ ನಿಯಂತ್ರಣವನ್ನು ದಿಲ್ಲಿ ಸರಕಾರಕ್ಕೆ ಹಸ್ತಾಂತರಿಸಲು ಲೆ| ಗ| ಅನಿಲ್‌ ಬೈಜಾಲ್‌ ಒಪ್ಪುತ್ತಿಲ್ಲ ಎಂದು ದಿಲ್ಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. 

Advertisement

ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿಧೇಯತೆ ತೋರಲು ಕೇಂದ್ರ ಸರಕಾರ ಬಹಿರಂಗವಾಗಿ ನಿರಾಕರಿಸಿರುವುದು ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ ಎಂದು ಕೇಜ್ರಿವಾಲ್‌ ಟೀಕಿಸಿದ್ದಾರೆ.

ಬೈಜಾಲ್‌ ಜತೆಗೆ 25 ನಿಮಿಷಗಳ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ಸೇವಾ ವಿಭಾಗದ ನಿಯಂತ್ರಣವನ್ನು ದಿಲ್ಲಿ ಸರಕಾರಕ್ಕೆ ಹಸ್ತಾಂತರಿಸಕೂಡದೆಂದು ಕೇಂದ್ರ ಗೃಹ ಸಚಿವಾಲಯ ಬೈಜಾಲ್‌ ಅವರಿಗೆ ಸಲಹೆ ನೀಡಿದೆ ಎಂದು ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next