Advertisement

‘ಭಾರತ್ ಜೋಡೋ’ಯಾತ್ರಿಗಳಿಗೆ ದೀಪಾವಳಿ ಗಿಫ್ಟ್ ನೀಡಿದ ರಾಹುಲ್ ಗಾಂಧಿ

05:21 PM Oct 25, 2022 | Team Udayavani |

ಹೈದರಾಬಾದ್ : ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ’ ಯಾತ್ರಾ ಶಿಬಿರದಲ್ಲಿ ಕೆಲಸ ಮಾಡುವ ಎಲ್ಲಾ ಯಾತ್ರಿಗಳು, ಚಾಲಕರು ಮತ್ತು ಕಾರ್ಮಿಕರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೀಪಾವಳಿಯ ಶುಭಾಶಯಗಳನ್ನು ಕೋರಿ ಉಡುಗೊರೆಗಳನ್ನು ನೀಡಿದ್ದಾರೆ.

Advertisement

ಎಲ್ಲರಿಗೂ ಬೆಳ್ಳಿ ನಾಣ್ಯಗಳು ಮತ್ತು ಸಿಹಿತಿಂಡಿಗಳನ್ನು ನೀಡಿ ಪತ್ರದ ಸಂದೇಶದಲ್ಲಿ ”ಭಾರತದ ನಿಜವಾದ ಮೌಲ್ಯಗಳಲ್ಲಿನ ನಂಬಿಕೆಯು ಮುಂದಿನ ಹಾದಿಯನ್ನು ಬೆಳಗಿಸುತ್ತದೆ” ಎಂಬ ಸಂದೇಶ ನೀಡಿದ್ದಾರೆ.

ರಾಹುಲ್ ಅವರು ಇಡೀ ಯಾತ್ರೆಯಲ್ಲಿ ತಮ್ಮೊಂದಿಗೆ ಸಾಗುತ್ತಿರುವ ಕೆಲಸಗಾರರಿಗೆ ಮತ್ತು ಚಾಲಕರಿಗೆ ಬೆಳ್ಳಿ ನಾಣ್ಯ ಮತ್ತು ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿ “ಸುಂದರವಾದ ಭಾರತ್ ಜೋಡೋ ಯಾತ್ರೆಯಲ್ಲಿ ನಾವು ಕೈಜೋಡಿಸಿದ್ದೇವೆ. ನಿಮ್ಮ ನಂಬಿಕೆ, ನಿಮ್ಮ ಮೇಲಿನ ನಿಮ್ಮ ನಂಬಿಕೆ ಮತ್ತು ಭಾರತದ ನಿಜವಾದ ಮೌಲ್ಯಗಳು ದ್ವೇಷವನ್ನು ಸೋಲಿಸುತ್ತದೆ ಮತ್ತು ಮುಂದಿನ ಹಾದಿಯನ್ನು ಬೆಳಗಿಸುತ್ತದೆ. “ಮಾತನಾಡಬೇಡ, ಮಾಡು. ಹೇಳಬೇಡ, ತೋರಿಸು. ಭರವಸೆ ನೀಡಬೇಡಿ, ಸಾಬೀತುಪಡಿಸಿ. ನಾನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ ಎಂದು ಗಾಂಧಿಯವರು ಬರೆದ ಪತ್ರವನ್ನು ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದೆ

ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7 ರಂದು ಪ್ರಾರಂಭವಾದ 3,570 ಕಿಮೀ ಯಾತ್ರೆಯು ಮತ್ತು ಮುಂದಿನ ಐದು ತಿಂಗಳು ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ ಮತ್ತು 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next