Advertisement

ಫ‌ಲಾನುಭವಿಗಳಿಗೆ ಆದೇಶ ಪತ್ರ

07:14 AM Jun 22, 2020 | Lakshmi GovindaRaj |

ಬರಗೂರು: ದಿವ್ಯಾಂಗ ವೇತನ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧ್ಯಾಪ್ಯ ವೇತನ, ನಿರ್ಗತಿಕರ ವಿಧವಾ ವೇತನ,  ಸಂಧ್ಯಾ ಸುರಕ್ಷಾ ವೇತನ ಸೇರಿದಂತೆ ಸುಮಾರು 144 ಪಿಂಚಣಿ ಫ‌ಲಾನುಭವಿ ಗಳಿಗೆ ಮಾಸಾಶನಗಳ ಆದೇಶ ಪ್ರತಿ ಗಳನ್ನು  ತಾಲೂಕು ದಂಡಾಧಿಕಾರಿ ನಾಹಿದಾ ಜಂಜಂ ವಿತರಿಸಿದರು. ನಂತರ ಮಾತನಾಡಿದರು.

Advertisement

ಪಿಂಚಣಿ ಅದಾಲತ್‌ ಮತ್ತು ಪೌತಿ ಖಾತೆ, ಪಹಣಿ ತಿದ್ದುಪಡಿ ಆಂದೋಲನದ ಮುಖ್ಯ ಉದ್ದೇಶ ಸುಮಾರು ಪಹಣಿದಾರ ರೈತರು ಮೃತರಾಗಿದ್ದು ತಾಲೂಕು  ಕಚೇರಿಗೆ ಅಲೆಯುವಂತಾಗಿದೆ ಹಾಗೂ ಪಟ್ಟಣಕ್ಕೆ ಬಸ್‌, ಆಟೋಗಳಲ್ಲಿ ಬಂದು ಮಧ್ಯ ವರ್ಥಿಗಳ ಹಾವಳಿಯಿಂದ ಪಿಂಚಣಿ ದಾರರು ನೂರಾರು ರೂ.ಗಳನ್ನು ವ್ಯಯ ಮಾಡಿಕೊಳ್ಳುತ್ತಿದ್ದು ಅದನ್ನು ತಪ್ಪಿಸುವ ಸಲುವಾಗಿ ನಮ್ಮ ಕಂದಾಯ  ಇಲಾಖೆ ಅಧಿಕಾರಿಗಳು ವೃದ್ಧರು,

ದಿವ್ಯಾಂಗರು, ವಿಧವೆಯರ ಮನೆ ಬಾಗಿಲಿಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದ ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಮಾಸಿಕ ಪಿಂಚಣಿ ಒದಗಿಸುವ ಕಾರ್ಯಕ್ಕೆ ಮುಂದಾಗಲಿದೆ ಎಂದು  ತಿಳಿಸಿದರು. ಜಿಪಂ ಸದಸ್ಯ ರಾಮಕೃಷ್ಣಪ್ಪ, ಉಪ ತಹಶೀಲ್ದಾರ್‌ ಚಂದ್ರಪ್ಪ, ಪ್ರಭಾರ ಕಂದಾಯ ತನಿಖಾಧಿಕಾರಿ ಮಂಜು, ದ್ವಾರನಕುಂಟೆ ಗ್ರಾಪಂ ಅಧ್ಯಕ್ಷ ತಿಪ್ಪೇಶ್‌ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next