Advertisement

ನೀರಿನ ಸೆಲೆ ಹೆಚ್ಚಿಸುವ ಕೆಲಸ ಆಗಲಿ: ಮಹಾಲಿಂಗ ನಾಯ್ಕ

12:47 AM Apr 27, 2019 | Team Udayavani |

ಬೆಂಗಳೂರು: ರೈತರ ಬಗ್ಗೆ ಒಲವು ತೋರುವ ಸರ್ಕಾರ, ಗ್ರಾಮೀಣ ಮಟ್ಟದಲ್ಲಿ ನೀರಿನ ಸೆಲೆ ಹೆಚ್ಚಿಸಲು ಕೆಲಸ ನಿರ್ವಹಿಸಬೇಕು ಎಂದು “ಬರಡು ಭೂಮಿಯ ಭಗೀರಥ’ ಖ್ಯಾತಿಯ ಮಹಾಲಿಂಗ ನಾಯ್ಕ ಹೇಳಿದ್ದಾರೆ.

Advertisement

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕೆಲವು ಪ್ರದೇಶಗಳಲ್ಲಿ ಜೋರಾಗಿ ಮಳೆ ಬಂದಾಗ ನೀರು ವ್ಯರ್ಥವಾಗಿ ಹೋಗುತ್ತದೆ.

ಅದನ್ನು ಹಿಡಿದಿಡುವ ಪ್ರಯತ್ನವಾಗಬೇಕು. ಚೆಕ್‌ ಡ್ಯಾಂ, ಇಂಗುಗುಂಡಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸವಾಗಬೇಕು. ಹೀಗೆ ಮಾಡಿದಾಗ ಮಾತ್ರ, ನೀರಿನ ಸೆಲೆ ಹೆಚ್ಚಿಸಲು ಸಾಧ್ಯ ಎಂದು ತಿಳಿಸಿದರು.

ಕಾಂಕ್ರೀಟ್‌ ಕಾಡಿನಲ್ಲಿ ಭವಿಷ್ಯವಿಲ್ಲ. ನಾಳಿನ ನೆಮ್ಮದಿಯಿಲ್ಲ. ನೆಮ್ಮದಿ ನೆಲೆಯಿರುವುದು ನಮ್ಮ ಹಳ್ಳಿಯ ಮಣ್ಣಿನಲ್ಲಿ. ಭೂ ತಾಯಿ ಮಡಿಲಲ್ಲಿ. “ಬನ್ನಿ ಯುವಕರೇ ಹಳ್ಳಿಗೆ, ಕೃಷಿ ಮಾಡೋಣ, ಭವಿಷ್ಯದ ಭಾರತ ಕಟ್ಟೋಣ,’ ಎಂದು ಯುವ ಸಮೂಹಕ್ಕೆ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next