Advertisement

ಗೋವಾದ ಪ್ರತಿಪಕ್ಷದವರಿಗೂ ಸಿಎಂ ಪತ್ರ ಬರೆಯಲಿ: ಜೋಶಿ

03:45 AM Jul 17, 2017 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಹದಾಯಿ ವಿಚಾರವಾಗಿ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ. ಜತೆಗೆ ಗೋವಾ ಪ್ರತಿಪಕ್ಷದ ಮುಖಂಡರಿಗೂ ಪತ್ರ ಬರೆಯಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಸಲಹೆ ನೀಡಿದರು. ಪ್ರಧಾನಿ ಮೋದಿ ಅವರ ಆಶಯವೂ ಇದೇ ಆಗಿದೆ. ಕೇವಲ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ  ಮನವೊಲಿಸಲು ಪ್ರಯತ್ನಿಸಲಿ. ಈ ಹಿಂದೆ ರಾಜ್ಯಕ್ಕೆ ಒಂದು ಹನಿ ನೀರನ್ನೂ ಕೊಡಬೇಡಿ ಎಂದು ಸೋನಿಯಾ ಗಾಂಧಿ ಹೇಳಿದ್ದು, ಮೊದಲು ಅವರ ಮನವೊಲಿಸಲಿ ಎಂದು ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next