Advertisement

ಉಪವಿಭಾಗ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲಿ

05:45 PM Apr 13, 2022 | Team Udayavani |

ಬೈಲಹೊಂಗಲ: ಬ್ರಿಟಿಷರ ಕಾಲದಿಂದಲೂ ಕಂದಾಯ ಉಪವಿಭಾಗವಾಗಿರುವ ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ಮೂಲಕ ತೆರಳಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

Advertisement

ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ಆಡಳಿತತ್ಮಾಕ ದೃಷ್ಟಿಯಿಂದ ವಿಭಜಿಸುವುದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲನ್ನು ಜಿಲ್ಲಾ ಕೇಂದ್ರವ°ನಾಗಿ ಮಾಡಬೇಕು. ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಹಾಗೂ ಸಾಮಾಜಿಕ, ಐತಿಹಾಸಿಕ, ವಾಣಿಜ್ಯ, ಕೃಷಿ, ಕಾನೂನು ಇತ್ಯಾದಿಗಳಿಂದ ಕೇಂದ್ರಿಕೃತವಾಗಿದ್ದು, ದೇಶದ ಸ್ವಾತ್ರಂತ್ರ್ಯಕ್ಕೋಸ್ಕರ ಹೋರಾಡಿದ ಈ ಗಂಡುಮೆಟ್ಟಿನ ನಾಡಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕ ವೀರರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ. ಏಷ್ಯಾದಲ್ಲಿಯೇ ಪ್ರಸಿದ್ಧವಾದ ಹತ್ತಿ ಮಾರುಕಟ್ಟೆಗಳಲ್ಲಿ ಬೆ„ಲಹೊಂಗಲ ಎಪಿಎಂಸಿ ರಾಜ್ಯದಲ್ಲಿಯೇ ಮೊದಲನೆಯದು. ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು ಎಲ್ಲ ಸವಲತ್ತು ಹೊಂದಿವೆ.

ಈಗಾಗಲೇ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಖಾನಾಪುರ, ಕಿತ್ತೂರ ತಾಲುಕುಗಳಿಂದ ಕೂಡಿದ ಕಂದಾಯ ಉಪವಿಭಾಗ ಕೇಂದ್ರವಾಗಿದ್ದು,ಇದನ್ನೆ ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ತುಂಬಾ ಅನುಕೂಲವಾಗುತ್ತದೆ. ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹೊಸೂರ ಗಂಗಾಧರ ಸ್ವಾಮೀಜಿ, ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ನಯಾನಗರ ಅಭಿನವ ಸಿದ್ದಲಿಂಗ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಬುಡ್ರಕಟ್ಟಿ ಮೃತ್ಯುಂಜಯ ಸ್ವಾಮೀಜಿ, ಆರಾದ್ರಿಮಠದ ಮಹಾಂತೇಶ ಶಾಸ್ತ್ರೀ ಸಾನ್ನಿಧ್ಯ ವಹಿಸಿ ಮಾತನಾಡಿ, ಸರ್ಕಾರ ಆಡಳಿತ್ಮಾಕ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವದಾದರೆ ಉಪವಿಭಾಗ ಕೇಂದ್ರವಾದ ಬೆ„ಲಹೊಂಗಲವನ್ನೇ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಡಾ.ಸಿ.ಎಸ್‌.ಸಾಧುನವರ, ಮಹಾಂತೇಶ ತುರಮರಿ, ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ರುದ್ರಪ್ಪ ಹೊಸಮನಿ, ಬಾಬುಸಾಬ ಸಂಗೊಳ್ಳಿ, ಈಶ್ವರ ಉಳ್ಳೆಗಡ್ಡಿ, ಬಿ.ಎಂ. ಚಿಕ್ಕನಗೌಡ್ರ, ಜಗದೀಶ ಬೂದಿಹಾಳ, ನಾರಾಯಣ ನಲವಡೆ, ಆರ್‌.ಎ.ಪಾಟೀಲ, ಸಂತೋಷ ಭಾಂವಿ, ಅಶೋಕ ಬಾಳೇಕುಂದರಗಿ ಮಾತನಾಡಿದರು.

Advertisement

ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಅಮಿತ ಪಾಟೀಲ, ಶಂಕರ ಮಾಡಲಗಿ, ಪ್ರಮೋದಕುಮಾರ ವಕ್ಕುಂದಮಠ, ಬಿ.ಬಿ.ಗಣಾಚಾರಿ, ಡಾ.ಚಿದಂಬರ ಕುಲಕರ್ಣಿ, ಡಾ. ಶರಣಕುಮಾರ ಅಂಗಡಿ, ಡಾ.ಮಂಜುನಾಥ ಮುದುಕನಗೌಡರ, ಡಾ.ಅಶೋಕ ದೊಡವಾಡ, ಕಿರಣ ಸಾಧುನವರ, ಬೊಮ್ಮನಾಯ್ಕ ಪಾಟೀಲ, ಕಾರ್ತಿಕ ಪಾಟೀಲ, ಮಂಜುನಾಥ ಸೋಮನ್ನವರ, ಬುಡ್ಡೇಸಾಬ ಶಿರಸಂಗಿ ದಾವಲಬಾಯಿ ಕೊಂಡಗೊಳಿ, ಕುಮಾರ ದೇಶನೂರ, ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಹೋಟಿ, ಮಹೇಶ ಹರಕುಣಿ, ಶ್ರೀಶೈಲ ತೊಟಗಿ, ಬಸವರಾಜ ಉಪ್ಪಾರ, ವಿರುಪಾಕ್ಷ ವಾಲಿ, ಸುಭಾಸ ತುರಮರಿ, ಸೋಮನಾಥ ಸೊಪ್ಪಿಮಠ, ಶಿವಾನಂದ ಬಡ್ಡಿಮನಿ, ಅಬ್ದುಲರೆಹಮಾನ ಹುಬ್ಬಳ್ಳಿ, ಬಾಬುಸಾಬ ಸುತಗಟ್ಟಿ, ಸಂಗಮೇಶ ಸವದತ್ತಿಮಠ, ಉಮಾ ಬುಲಾಕೆ, ಪಿ.ಬಿ.ಬಡಿಗೇರ, ಎಮ.ಆರ್‌. ಮೆಳವಂಕಿ, ಜ್ಞಾನೇಶ್ವರ ಬೊಂಗಾಳೆ, ಎಂ.ಎಂ. ಸೋಪಿನ, ಶಿವಾನಂದ ಇಂಚಲ, ಸಂತೋಷ ಕೊಳವಿ, ಮಹೇಶ ಕೋಟಗಿ, ಸುನೀಲ ಮರಕುಂಬಿ, ಮನೋಜ ಕೆಳಗೇರಿ ಸಾವಿರಾರು ಜನರು ಇದ್ದರು.

ಕಲಾಪದಿಂದ ದೂರ: ಬೈಲಹೊಂಗಲ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಕರೆ ನೀಡಿದ್ದ ಪ್ರತಿಭಟನೆಗೆ ವಕೀಲರ ಸಂಘ ತಮ್ಮ ಕಲಾಪಗಳಿಂದ ದೂರವುಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಡಿವೈಎಸ್‌ಪಿ ಶಿವಾನಂದ ಕಟಗಿ ಹಾಗೂ ಸಿಬ್ಬಂದಿ ಬೀಗಿ ಪೊಲೀಸ್‌ ಬಂದೋಬಸ್ತ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next