Advertisement

ಯಾವುದೇ ಸರ್ಕಾರ ಬರಲಿ, ರಾಮಮಂದಿರ ನಿರ್ಮಿಸಲಿ

11:27 PM Apr 14, 2019 | Team Udayavani |

ಬೆಳಗಾವಿ: ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂದು ಹಲವು ವರ್ಷಗಳ ಕಾಲ ಹೋರಾಟ ನಡೆದಿದೆ. ಮುಂದೆ ಯಾವುದೇ ಸರ್ಕಾರ ಬಂದರೂ ರಾಮ ಮಂದಿರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪೇಜಾವರ ಮಠಾ ಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಆಗ್ರಹಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರವಾದರೂ ಮಂದಿರ ನಿರ್ಮಾಣ ಕುರಿತು ಠರಾವು ಪಾಸ್‌ ಮಾಡಬೇಕು. ಇಲ್ಲವೇ, ಸುಗ್ರೀವಾಜ್ಞೆ ಮೂಲಕ ಮಂದಿರ ನಿರ್ಮಾಣ ಮಾಡಬೇಕು. ಜತೆಗೆ ಮಂದಿರದ ಸ್ವಲ್ಪ ದೂರದಲ್ಲಿಯೇ ಮಸೀದಿಯನ್ನೂ ನಿರ್ಮಾಣ ಮಾಡುವ ಮೂಲಕ ಸೌಹಾರ್ದತೆ ಕಾಪಾಡುವ ಕೆಲಸ ಮಾಡಬೇಕು.

ಮಂದಿರ ವಿವಾದದಲ್ಲಿ ಘರ್ಷಣೆ ಆಗಬಾರದು ಎಂಬುದು ನಮ್ಮ ಉದ್ದೇಶ. ಶ್ರೀ ರಾಮಮಂದಿರ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಆದಷ್ಟು ಬೇಗ ಮಂದಿರ ವಿಷಯ ಚರ್ಚೆಗೆ ಬರಲಿದೆ. ಲೋಕಸಭೆ ಚುನಾವಣೆಗೆ ಮುಂಚೆಯೇ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆ ಇತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next