Advertisement

ಮೀನು ಮಾರುಕಟ್ಟೆ ಶೀಘ್ರ ಆರಂಭಿಸಲಿ

06:53 AM Jun 10, 2020 | Suhan S |

ಶಿರಸಿ: ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಳಿಸಿದ ಮೀನು ಮಾರುಕಟ್ಟೆ ವ್ಯವಹಾರ ಜಿಲ್ಲಾದ್ಯಂತ ಲಾಕ್‌ಡೌನ್‌ ತೆರವಿನ ನಂತರವೂ ಶಿರಸಿಯಲ್ಲಿ ಮಾತ್ರ ಬಂದಾಗಿರುವ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿ ಮೀನಿನ ಮಾರ್ಕೆಟಿನಲ್ಲಿ ಮೀನಿನ ವ್ಯವಹಾರ ಪ್ರಾರಂಭಿಸಬೇಕು ಎಂದು ಹೋರಾಟಗಾರ ಎ.ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

Advertisement

ಶಿರಸಿಯಲ್ಲಿ ಹಳೆ ಬಸ್‌ ನಿಲ್ದಾಣದ ಪಕ್ಕದಲ್ಲಿ ಮತ್ತು ಅಗಸೆ ಬಾಗಿಲಿನಲ್ಲಿ ನಗರಸಭೆ ಕಟ್ಟಡದಲ್ಲಿ ಹಿಂದಿನಿಂದಲೂ ನಿರಂತರವಾಗಿ ಮೀನು ವ್ಯಾಪಾರ ಜರುಗುತ್ತಿತ್ತು. ಆದರೆ ಲಾಕ್‌ಡೌನ್‌ ಸಂದರ್ಭದಲ್ಲಿನ 70 ದಿನಗಳಲ್ಲೂ ಸಂಪೂರ್ಣವಾಗಿ ಬಹಿರಂಗ ಮೀನಿನ ಮಾರಾಟ ಸ್ಥಗಿತಗೊಳಿಸಿದರು. ಭಟ್ಕಳ ತಾಲೂಕು ಒಂದು ಬಿಟ್ಟು ಉಳಿದೆಲ್ಲ ತಾಲೂಕಿನ ಮೀನು ಮಾರುಕಟ್ಟೆ ಸಂಕೀರ್ಣದಲ್ಲಿ ಬಹಿರಂಗವಾಗಿ ಮೀನಿನ ವ್ಯವಹಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿತ್ತು. ಆದರೆ ಶಿರಸಿಯಲ್ಲಿ ಮಾತ್ರ ಇಂದಿಗೂ ಅಧಿಕೃತವಾಗಿ ಮೀನಿನ ಮಾರ್ಕೇಟಿನ ಸಂಕೀರ್ಣ ಜಿಲ್ಲಾಡಳಿತ ಬಂದ್‌ ಮಾಡಿಟ್ಟು ಮೀನಿನ ವಹಿವಾಟಿಗೆ ತಡೆ ಉಂಟಾಗಿರುವುದಕ್ಕೆ ಕಾರಣ ಏನು ಎಂದು ಕೇಳಿದ್ದಾರೆ.

ಸೂಕ್ತ ಮುಂಜಾಗ್ರತ ಕ್ರಮ ನಿರ್ದೇಶನ ನೀಡಿ ಅತೀ ಶೀಘ್ರದಲ್ಲಿ ಮೀನು ಮಾರ್ಕೆಟಿನ ಸಂಕೀರ್ಣದಲ್ಲಿ ಹಿಂದಿನಂತೆಯೇ ಮೀನಿನ ವ್ಯವಹಾರ ಜರುಗಿಸಿ ಮೀನು ಪ್ರಿಯರಿಗೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next