Advertisement

ಗಡಿಯಲ್ಲಿ ಐವರು ನುಸುಳುಕೋರರ ಹತ್ಯೆಗೈದ ಸೇನೆ

06:10 AM Aug 08, 2017 | |

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಿಂದ ಭಾರತದ ಒಳನುಸುಳಲು ಯತ್ನಿಸಿದ ಐವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನೆ ಯಶಸ್ವಿಯಾಗಿದೆ. ಕಾಶ್ಮೀರದಲ್ಲಿ ಉಗ್ರರನ್ನು ಹುಡುಕಿ ಹುಡುಕಿ ಸದೆಬಡಿಯುವ ಪ್ರಕ್ರಿಯೆಯನ್ನು ಸೇನೆ ಮುಂದುವರಿಸಿರುವಾಗಲೇ ಈ ಬೆಳವಣಿಗೆ ನಡೆದಿದೆ.

Advertisement

ಸೋಮವಾರ ಸಂಜೆ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲ್‌ ವಲಯದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಗಸ್ತು ತಿರುಗುತ್ತಿದ್ದ ಗಡಿ ಭದ್ರತಾ ಪಡೆಯ ಯೋಧರ ಕಣ್ಣಿಗೆ ಎಲ್‌ಒಸಿಯಲ್ಲಿ ಅನುಮಾನಾಸ್ಪದ ಚಲನವಲನಗಳು ಕಂಡುಬಂದಿದ್ದು, ಅವರು ನುಸುಳುಕೋರರು ಎಂಬುದು ಗೊತ್ತಾಗುತ್ತಿದ್ದಂತೆ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ವೇಳೆ ಎರಡೂ ಕಡೆ ಗುಂಡಿನ ಚಕಮಕಿ ನಡೆದಿದ್ದು, ಎಲ್ಲ ಐವರು ಭಯೋತ್ಪಾದಕರನ್ನೂ ಸೇನೆ ಸದೆಬಡಿದಿದೆ.

ಹತ ಉಗ್ರರ ಬಳಿಯಿದ್ದ ಐದು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ತಡರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿತ್ತು ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಜು.23ರಂದು ನುಸುಳು ಯತ್ನ ನಡೆದಿದ್ದು, ಅದನ್ನೂ ಸೇನೆ ವಿಫ‌ಲಗೊಳಿಸಿತ್ತು. ಪ್ರಸಕ್ತ ವರ್ಷ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ 22 ನುಸುಳುವಿಕೆ ಯತ್ನವನ್ನು ವಿಫ‌ಲಗೊಳಿಸಿದೆ ಮತ್ತು 38 ಮಂದಿ ಸಶಸ್ತ್ರ ಉಗ್ರರನ್ನು ನಿರ್ಮೂಲನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next