Advertisement

ವೇದದ ಮಹತ್ವ ಎಲ್ಲರಿಗೂ ತಿಳಿಸಿ

03:37 PM Apr 10, 2017 | |

ಕಲಬುರಗಿ: ವೇದಗಳ ಸಂರಕ್ಷಣೆಯಾಗಬೇಕು ಹಾಗೂ ವೇದದ ಮಹತ್ವ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶ ದಿಂದ ವೇದಪಾರಾಯಣ ಅಭಿ ಯಾನ ಆರಂಭವಾಗಿದ್ದು, ವೇದ ಪಾರಾಯಣ ಗಳನ್ನು ಹೆಚ್ಚೆಚ್ಚು ಮಾಡಿಸಬೇಕೆಂದು ಪಂ| ಮಧುಸೂಧನ ಶಾಸ್ತ್ರೀ ಹಂಪಿಹೋಳಿ ಹೇಳಿದರು.

Advertisement

ನಗರದ ಸಾಯಿ ಮಂದಿರದಲ್ಲಿ ರವಿವಾರ ಬೆಳಗ್ಗೆ ನಡೆದ ವೇದಪಾರಾಯಣ ಅಭಿಯಾನದ 7 ನೇ  ವಾರ್ಷಿಕ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಕೃಷ್ಣಾದ ಶೇಷಭಟ್ಟರು, ಪುಣೆ, ಮುಂಬೈ, ಬೀದರ, ವಿಜಯಪುರ, ಕಲಬುರಗಿ, ಬೆಳಗಾವಿ ನಗರದ ವೇದ ವಿದ್ವಾಂಸರು ಭಾಗವಹಿಸಿದ್ದರು. ಸುಮಾರು 110 ಕ್ಕೂ ಹೆಚ್ಚು ವೇದ ಪಾರಾಯಣ ನಡೆಯಿತು.  ಉಪನ್ಯಾಸಕರಾಗಿ ಡಾ| ಯೋಗೇಶ ಜೋಶಿ ವೇದದ ಉತ್ಪತ್ತಿ, ಬೆಳವಣಿಗೆ ಹಾಗೂ ಮಹತ್ವ ತಿಳಿಸಿದರು. 

ದಾನಿಗಳಿಗೆ ವಸ್ತ್ರ ಮಂತ್ರಾಕ್ಷತೆ, ಫಲಪುಷ್ಪ ನೀಡಿ ಆಶೀರ್ವದಿಸಲಾಯಿತು ವೇದ ವಿದ್ವಾಂಸರಿಗೆ ದಕ್ಷಿಣೆ ಹಾಗೂ ವಸ್ತ್ರ ನೀಡಿ ಸತ್ಕರಿಸಲಾಯಿತು. ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಲೋಕೇಶಭಟ್ಟ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next