Advertisement

ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

05:28 PM Oct 14, 2021 | Team Udayavani |

ಮಳವಳ್ಳಿ: ತಾಲೂಕಿನ ಬಿಜಿಪುರ ಹೋಬ ಳಿಯ ಕದಬಹಳ್ಳಿ ಕೆರೆಯ ಬಳಿ ಚಿರತೆ ಯೊಂದು ಸೋಮವಾರ ಸಂಜೆ ಕಾಣಿಸಿ ಕೊಂಡಿದ್ದರಿಂದ ಜನರು ಭಯಬೀತರಾಗಿ ದ್ದಾರೆ. ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಬಹಳ್ಳಿ ಕೆರೆಯ ಬಳಿ ಮುಳ್ಳಿನಪೊದೆಯಲ್ಲಿ ಚಿರತೆ ಕಾಣಿಸಿ ಕೊಂಡಿದೆ.

Advertisement

ಅಕ್ಕಪಕ್ಕದ ಗ್ರಾಮದ ರೈತರು ಆತಂಕಗೊಂಡಿದ್ದು, ಕೂಡಲೇ ಗ್ರಾಪಂ ಅಧ್ಯಕ್ಷ ಕೆ.ಎಸ್‌.ಮಲ್ಲಿಕಾರ್ಜುನ ಸ್ವಾಮಿ ಅರಣ್ಯ ಇಲಾಖೆಯ ಅ ಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಸ್ಥಳಕ್ಕೆ ಅರಣ್ಯ ಇಲಾಖೆ ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಲಯ ಅರಣ್ಯಾ ಧಿಕಾರಿ ಆಸೀಫ್‌ ಅಹಮ್ಮದ್‌ ಮಾತನಾಡಿ, ಈ ಭಾಗದಲ್ಲಿ ಚಿರತೆ ಯೊಂದು ಮರಿ ಹಾಕಿತ್ತು. ಮರಿಯನ್ನು ಮೈಸೂರಿನ ಮೃಗಾಲಯಕ್ಕೆ ಬಿಡಲಾ ಗಿತ್ತು. ಹೀಗಾಗಿ ತಾಯಿ ಚಿರತೆ ಮರಿಗಾಗಿ ಹುಡುಕಾಟ ನಡೆಸುತ್ತಿರಬಹದು. ಸದ್ಯದ ಲ್ಲಿಯೇ ಚಿರತೆಯನ್ನು ಸೆರೆ ಹಿಡಿಯ ಲಾಗುವುದು ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next