Advertisement

ಮಾರೆಮ್ಮನ ಗುಡಿ ಗುಡ್ಡದ ಬಳಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನ

01:24 PM Jan 05, 2022 | Team Udayavani |

ಮಾನ್ವಿ: ತಾಲೂಕಿನ ನೀರಮಾನ್ವಿ ಹಾಗೂ ಬೆಟ್ಟದೂರು ಗ್ರಾಮದ ಮಾರೆಮ್ಮ ಗುಡಿ ಗುಡ್ಡದ ಹತ್ತಿರದಲ್ಲಿ ಶನಿವಾರ ಸಾಯಂಕಾಲ ಎರಡು ಚಿರತೆಗಳನ್ನು ನೋಡಿರುವುದಾಗಿ ಕೆಲವರು ಹೇಳಿದ್ದು, ಈ ಎರಡು ಗ್ರಾಮಗಳ ಜನರು ಭಯ ಭೀತರಾಗಿದ್ದಾರೆ.

Advertisement

ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವನ್ಯಜೀವಿ ತಜ್ಞರ ತಂಡ ಬೀಡು ಬಿಟ್ಟಿದ್ದು, ಚಿರತೆಯ ಸೆರೆ ಹಿಡಿಯಲು ಬೋನು ಕೂಡ ಅಳವಡಿಸಲಾಗಿದೆ. ಆಕರ್ಷಣೆಗಾಗಿ ನಾಯಿಯನ್ನು ಬೋನ್‌ನಲ್ಲಿ ಇಡಲಾಗಿದ್ದು ಬೋನು ಹಾಗೂ ಸುತ್ತಮುತ್ತ ಚಿರತೆಯ ಚಲನವಲನ ಕಂಡು ಹಿಡಿಯಲು ಟ್ರಾಪ್‌ ಕ್ಯಾಮಾರಗಳನ್ನು ಅಳವಡಿಸಲಾಗಿದೆ.

ಕಳೆದ ಮೂರು ದಿನಗಳಿಂದ ಅರಣ್ಯ ಸಿಬ್ಬಂದಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದು, ಇದುವರೆಗೆ ಯಾವುದೇ ಮಾಹಿತಿ ದೊರೆತಿಲ್ಲ. ಮಾನ್ವಿ ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ ಮಾತನಾಡಿ, ಗ್ರಾಮದ ತಿಮ್ಮಪ್ಪ, ವೆಂಕಟೇಶ ಗ್ರಾಮದ ಮಾರೆಮ್ಮ ಗುಡಿ ಗುಡ್ಡದಲ್ಲಿ ಶನಿವಾರ ಸಾಯಂಕಾಲ ಎರಡು ಚಿರತೆ ನೋಡಿರುವುದಾಗಿ ತಿಳಿಸಿದ್ದರಿಂದ ಕಾರ್ಯಚರಣೆ ನಡೆಸಲಾಗುತ್ತಿದೆ. ಗುಡ್ಡದ ಸುತ್ತಮುತ್ತ ಪ್ರದೇಶದಲ್ಲಿ ಬೋನು ಅಳವಡಿಸಲಾಗಿದೆ.

ಚಿರತೆಯ ಹೆಜ್ಜೆ ಗುರುತು ಹಾಗೂ ಮಲ ಕಂಡುಬರುತ್ತದೆಯೇ ಎಂದು ಕೂಡ ಪರೀಕ್ಷಿಸಲಾಗುತ್ತಿದೆ. ತಾಲೂಕಿನ ಈ ಭಾಗದಲ್ಲಿ ಚಿರತೆಗಳು ಇದುವರೆಗೂ ಕಂಡು ಬಂದಿಲ್ಲ. ಗುಡ್ಡದಿಂದ ಗ್ರಾಮ ಸುಮಾರು 2 ಕಿ.ಮೀ. ದೂರ ಇರುವುದರಿಂದ ಗ್ರಾಮಕ್ಕೆ ಚಿರತೆಗಳು ಬರುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next