Advertisement

ಜಾಗದ ವಿವಾದದಿಂದಾಗಿ ಸ್ಥಗಿತಗೊಂಡ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಭೇಟಿ

11:05 PM May 22, 2020 | Sriram |

ಉಡುಪಿ: ಹಾರಾಡಿ ಗ್ರಾ.ಪಂ. ವ್ಯಾಪ್ತಿಯ ಎನ್‌.ಎಚ್‌.66 ಸುಪ್ರೀಂ ಫೀಡ್ಸ್‌ ನಿಂದ ಬನ್ನಾಳ ರೋಹಿಣಿ ಶೆಟ್ಟಿ ಮನೆ ವರೆಗಿನ ರೂ.20 ಲಕ್ಷ ವೆಚ್ಚದಲ್ಲಿ ಮಂಜೂರಾದ ರಸ್ತೆ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಸ್ಥಳೀಯವಾಗಿ ಖಾಸಗಿ ಜಾಗದ ವಿವಾದದಿಂದ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಶಾಸಕ ಕೆ. ರಘುಪತಿ ಭಟ್‌ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದರು.

Advertisement

ಈ ರಸ್ತೆ ಹಾದು ಹೋಗುವ ಎರಡು ಭಾಗದಲ್ಲಿ ಸಮಸ್ಯೆ ಕಂಡು ಬಂದಿದ್ದು, ಒಂದು ಭಾಗದಲ್ಲಿನ ಮನೆಯವರು ಶಾಸಕರ ಮಾತುಕತೆಗೆ ಒಪ್ಪಿ ಗೆ ಸೂಚಿಸಿ ರಸ್ತೆ ಕಾಮಗಾರಿಗೆ ಅನುವು ಮಾಡಿಕೊಟ್ಟರು. ತತ್‌ಕ್ಷಣದಲ್ಲಿ ತಕರಾರು ಇರುವ ಸ್ಥಳದ ಗಡಿ ಗುರುತು ಮಾಡುವಂತೆ ತಹಶೀಲ್ದಾರ್‌ ಹಾಗೂ ಭೂ ಮಾಪನಾಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ಮುಂದುವರಿಸಲು ತಿಳಿಸಿದರು.ಹಾರಾಡಿ ಗ್ರಾ.ಪಂ. ಸದಸ್ಯ ರಘುರಾಮ್‌ ಶೆಟ್ಟಿ , ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ, ಬ್ರಹ್ಮಾವರ ಪೊಲೀಸ್‌ ಉಪ ನಿರೀಕ್ಷಕ ರಾಘವೇಂದ್ರ ಸಿ. ಹಾಗೂ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೆ.ಆರ್‌.ಐ.ಡಿ.ಎಲ್‌ ಅಭಿಯಂತರ ಹೇಮಂತ್‌ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next