Advertisement

Legislative Assembly: ಸುಳ್ಯ, ಕಡಬದ ಬಸ್‌ ಸಮಸ್ಯೆ: ಗಮನ ಸೆಳೆದ ಶಾಸಕಿ ಭಾಗೀರಥಿ

12:17 AM Jul 19, 2024 | Team Udayavani |

ಬೆಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಬಸ್‌ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದಾರೆ.

Advertisement

ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗಕ್ಕೆ ಮಂಜೂರಾದ, ಭಡ್ತಿ ಹೊಂದಿದ ಮತ್ತು ಖಾಲಿ ಇರುವ ಚಾಲಕ, ನಿರ್ವಾಹಕ ಮತ್ತು ಇತರ ಸಿಬಂದಿ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದ ಶಾಸಕಿ, ಸುಳ್ಯ, ಕಡಬ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವಷ್ಟು ಬಸ್‌ಗಳು ಸಂಚರಿಸದೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದರು.

ಉತ್ತರಿಸಿದ ಸಾರಿಗೆ ಸಚಿವರು, ಹಾಲಿ ಇರುವ ಸಾರಿಗೆ ಸೌಲಭ್ಯದ ಮಾಹಿತಿ ನೀಡಿದರು. ಹೆಚ್ಚಿನ ಸೌಲಭ್ಯಕ್ಕೆ ಬೇಡಿಕೆ ಬಂದಿದ್ದು, ಸಿಬಂದಿ ಕೊರತೆಯಿಂದ ಒದಗಿಸಲು ಸಾಧ್ಯವಾಗಿಲ್ಲ. 2023-24ನೇ ಸಾಲಿನ ಹಿಂದಿನ 7 ವರ್ಷಗಳಲ್ಲಿ ಸಿಬಂದಿ ನೇಮಕಾತಿ ಆಗಿಲ್ಲ. ಚಾಲನಾ ಸಿಬಂದಿಯ ನೇರ ನೇಮಕಾತಿ ಪ್ರಗತಿಯಲ್ಲಿದ್ದು, ಸಾರಿಗೆ ಸೌಲಭ್ಯ ಕಲ್ಪಿಸಲು ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಾಕಿ
ಸರಕಾರದಿಂದ ಹೈನುಗಾರಿಕೆ ಪ್ರತೀ ಲೀಟರ್‌ ಹಾಲಿಗೆ ನೀಡಲಾಗುವ ಪ್ರೋತ್ಸಾಹಧನದ ಬಗೆಗಿನ ಪ್ರಶ್ನೆಗೆ ಪ್ರತೀ ಲೀಟರ್‌ ಗುಣಮಟ್ಟದ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗಿದೆ ಎಂದು ಉತ್ತರ ನೀಡಲಾಗಿದೆ. ಹೈನುಗಾರರಿಗೆ ಪಾವತಿಸಬೇಕಾದ ಪ್ರೋತ್ಸಾಹಧನ ಮೊತ್ತದಲ್ಲಿ ಸುಳ್ಯ ಮತ್ತು ಕಡಬ ತಾಲೂಕಿಗೆ ಪಾವತಿಸಬೇಕಾದ ಬಾಕಿಯ ಕುರಿತು ಶಾಸಕರು ವಿವರ ಕೇಳಿದಾಗ ಉಭಯ ತಾಲೂಕುಗಳಲ್ಲಿ 4.33 ಕೋಟಿ ರೂ. ಪ್ರೋತ್ಸಾಹಧನ ವಿತರಣೆಗೆ ಬಾಕಿ ಇದೆ; ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಸಚಿವರು ಉತ್ತರಿಸಿದರು.

ಕಡಬ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯನ್ನು ಪ್ರಾರಂಭಿಸುವಂತೆ ಸಲ್ಲಿಸಲಾಗಿರುವ ಪ್ರಸ್ತಾವನೆ ಗಮದಲ್ಲಿದ್ದು ಪರಿಶೀಲಿಸುತ್ತೇವೆ ಎಂದು ಲೋಕೋಪಯೋಗಿ ಸಚಿವರು ಉತ್ತರಿಸಿದರು.

Advertisement

ಸುಳ್ಯ ತಾಲೂಕಿನಲ್ಲಿ 10 ಮತ್ತು ಕಡಬ ತಾಲೂಕಿನಲ್ಲಿ 8 ಮಂದಿ ಪರವಾನಿಯುಳ್ಳ ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next