Advertisement

Gujarat ಅಸೆಂಬ್ಲಿಯಲ್ಲಿ ಗದ್ದಲ: ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಉಚ್ಚಾಟನೆ

01:29 AM Aug 24, 2024 | Team Udayavani |

ಗಾಂಧಿನಗರ: ಗುಜರಾತ್‌ ವಿಧಾನಸಭೆ ಅಧಿವೇಶನ­ದಲ್ಲಿ ಗದ್ದಲ ಉಂಟುಮಾಡಿದ ಕಾರಣಕ್ಕೆ ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಮೆವಾನಿ ಅವರನ್ನು ಸದನದಿಂದ ಉಚ್ಚಾ­­­ಟನೆ ಮಾಡಲಾಗಿದೆ. ಶುಕ್ರವಾರ ಅಧಿವೇಶನ ವೇಳೆ ಅವರು ಸದನದ ಬಾವಿಗಿ­ಳಿದು ಗದ್ದಲ ಸೃಷ್ಟಿಸಿದ್ದಾರೆ. ಮಾರ್ಷಲ್‌ಗ‌ಳು ಅವರನ್ನು ಹೊರಹಾಕಿದ್ದಾರೆ. ಗುಜ­ರಾತ್‌ ಪೊಲೀಸರು ವಶಪಡಿ­ಸಿಕೊಂಡಿದ್ದ ಮಾದಕವ­ಸ್ತು­­ಗಳ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆ ಜಿಗ್ನೇಶ್‌ ಬಿಜೆಪಿ ವಿರುದ್ಧ ಜೋರು ಧ್ವನಿಯಲ್ಲಿ ಕೂಗುತ್ತಾ, ಅತ್ಯಾಚಾರದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಎಂದು ಸವಾಲು ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next