Advertisement

ಪಿಯು ಮೌಲ್ಯಮಾಪನ ಬಹಿಷ್ಕಾರ ಇಲ್ಲ: ಉಪನ್ಯಾಸಕರ ತೀರ್ಮಾನ

01:50 AM Mar 27, 2017 | Karthik A |

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಎದುರಾಗಿದ್ದ ಸಂಭಾವ್ಯ ಆಂತಕ ತಾತ್ಕಾಲಿಕವಾಗಿ ದೂರವಾಗಿದ್ದು, ಭರವಸೆ ಈಡೇರಿಸುವ ಸರಕಾರದ ಷರತ್ತಿಗೊಳಪಟ್ಟು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉಪನ್ಯಾಸ ಕರು ತೀರ್ಮಾನಿಸಿದ್ದಾರೆ.
ಶಾಸಕರ ಭವನದಲ್ಲಿ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಪದವಿಪೂರ್ವ ಪ್ರಾಂಶುಪಾಲರು, ಪದವಿ ಪೂರ್ವ ಉಪನ್ಯಾಸಕರ ಸಂಘದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಉಪನ್ಯಾ ಸಕರ ಬೇಡಿಕೆ ಸಂಬಂಧ ಚರ್ಚಿಸಲು ಎ. 13, 20ರಂದು ಸಭೆ ಕರೆಯುತ್ತೇನೆ ಎಂದು ಸಚಿವರು ಲಿಖೀತ ಭರವಸೆ ನೀಡಿದ್ದಾರೆ. 

Advertisement

ಈ ಹಿನ್ನೆಲೆಯಲ್ಲಿ  ನಿಗದಿಯಂತೆ ಎ. 4ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯು ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಪ್ರತಿಕ್ರಿಯಿಸಿ, ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೌಲ್ಯಮಾಪನ ಬಹಿಷ್ಕಾರವನ್ನು ತಾತ್ಕಾಲಿಕವಾಗಿ ಕೈಬಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next