Advertisement
ತಾಲೂಕಿನ ಶ್ರೀನಿವಾಸಪುರ ಗ್ರಾಪಂ ವ್ಯಾಪ್ತಿಯ ತೊರೆಪಾಳ್ಯ ಗ್ರಾಮಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾದರೂ, ಪ್ರತಿನಿತ್ಯ ಕೆಸರುಗದ್ದೆಯಂತಹ ಹಾಗೂ ಗುಂಡಿಗಳಿರುವ ರಸ್ತೆಯಲ್ಲಿ ಸಂಚರಿಸುವ ದುಸ್ಥಿತಿ ನೋಡಿ ಬೇಸತ್ತು ಗ್ರಾಮಸ್ಥರು ಪ್ರತಿ ಭಟನೆ ಮಾಡಿದ್ದರು. ಸಮಸ್ಯೆ ವಾಸ್ತವತೆ ಕಂಡ ಮಾಧ್ಯಮಗಳು ವರದಿ ಮಾಡಿದ್ದವು.
Related Articles
Advertisement
ಅಕ್ರಮ ರೆಸಾರ್ಟ್ನಲ್ಲಿ ಭರ್ಜರಿ ಭೋಜನ: ತೊರೆಪಾಳ್ಯ ಗ್ರಾಮಕ್ಕೆ ಭೇಟಿ ನೀಡುವ ಮೊದಲು ಬೈರಸಂದ್ರ ಗ್ರಾಮದಲ್ಲಿರುವ ಅಕ್ರಮ ರೆಸಾರ್ಟ್ ನಲ್ಲಿ ಕೆಲವು ಸದಸ್ಯರ ಜತೆ ಗೌಪ್ಯ ಮಾತುಕತೆ ಮಾಡಿದ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು, ಭರ್ಜರಿ ಭೋಜನ ಮಾಡಿ ಕಾರಿನಲ್ಲಿ ಕುಳಿತು ರಸ್ತೆ ಪರಿಶೀಲನೆ ಮಾಡಿದ್ದಾರೆ. ಅಕ್ರಮ ರೆಸಾರ್ಟ್ಗಳಿಗೆ ಶಾಸಕರು, ಸದಸ್ಯರು ಹೋದರೆ ಮಾಲೀಕರು ಸಕ್ರಮ ಮಾಡಿಕೊಳ್ಳಲು ಮನಸ್ಸು ಎಲ್ಲಿ ಮಾಡುತ್ತಾರೆ ಎಂಬ ಪ್ರಶ್ನೆ ಸ್ಥಳೀಯರು ಮಾಡಿದ್ದು, ಶಾಸಕರ ತರಾತುರಿ ಭೇಟಿ ಟೀಕೆಗೆ ಗುರಿಯಾಗಿದೆ.
ಪತ್ರಿಕಾಮಾಧ್ಯಮಗಳ ವಿರುದ್ಧ ಆಕ್ರೋಶ: ಗ್ರಾಮದ ರಸ್ತೆ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದ ಪತ್ರಿಕಾಮಾಧ್ಯಮದವರೇ ರಸ್ತೆ ಮಾಡಿಸಲಿದ್ದಾರೆ ಬಿಡಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಅವರು, ಗ್ರಾಮದ ಭೇಟಿ ಮಾಡಿದ ಸಂದರ್ಭದಲ್ಲಿ ಮಾಧ್ಯಮದವರ ಮೇಲೆ ಕಿಡಿಕಾರಿ ಶಾಸಕರನ್ನು ಪ್ರಶ್ನೆಯೇ ಮಾಡಬಾರದು. ನಮಗೆ ಸಮಸ್ಯೆ ಬಗೆಹರಿಸುವುದು ಗೊತ್ತು ಎಂದು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ.
ರಸ್ತೆ ವಾಸ್ತವ ಅರಿಯದ ಶಾಸಕ
ಗ್ರಾಮಕ್ಕೆ ಬರುವ ಮುಖ್ಯರಸ್ತೆ 800 ಮೀ. ಉದ್ದವಿದ್ದು, ಗುಂಡಿಬಿದ್ದು ಸಂಪೂರ್ಣ ಹಾಳಾಗಿದೆ. ಗ್ರಾಮಸ್ಥರು ಪಕ್ಕದ ಗ್ರಾಮದಲ್ಲಿ ಪಡಿತರ ತರಲು ಹೋಗುತ್ತಾರೆ. ಗ್ರಾಮಸ್ಥರ ಸಮಸ್ಯೆ, ರಸ್ತೆ ವಾಸ್ತವ ಅರಿಯದೇ ಶಾಸಕರು ಅವರ ಆಪ್ತರ ತೋಟದ ಮನೆಗೆ ಭೇಟಿ ನೀಡಿ ಗ್ರಾಮಸ್ಥರ ಮೇಲೆ ಕಿಡಿಕಾರಿ ಮುಖ್ಯರಸ್ತೆ ಪರಿಶೀಲನೆ ಮಾಡದೆ ವಾಪಸ್ ಹೋಗಿದ್ದಾರೆ.