Advertisement

Neha Case; ಸಚಿವ ಪ್ರಹ್ಲಾದ ಜೋಶಿ ಭಕ್ತ ಪ್ರಹ್ಲಾದ ಆಗಬಾರದು: ನಟ ಪ್ರಥಮ್ ಆಕ್ರೋಶ

02:30 PM Apr 21, 2024 | Team Udayavani |

ಹುಬ್ಬಳ್ಳಿ: ನೇಹಾ ಹತ್ಯೆ ಖಂಡನೀಯ. ಇಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಕ್ತ ಪ್ರಹ್ಲಾದ ಆಗಬಾರದು. ಉಗ್ರ ನರಸಿಂಹ ಆಗಬೇಕು. ಸರಿಯಾದ ಹೇಳಿಕೆಗಳನ್ನು ಕೊಡಬೇಕು ಎಂದು ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಆಗ್ರಹಿಸಿದ್ದಾರೆ.

Advertisement

ಮೃತ ನೇಹಾಳ ನಿವಾಸಕ್ಕೆ ಭೇಟಿಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ನಾವು ಸಿನಿಮಾ ಪ್ರಮೋಷನ್ಸ್ ಗೆ ಬರುತ್ತಿದ್ದೆವು. ಆದರೀಗ ಸೂತಕದ ಮನೆಗೆ ಬಂದಿದ್ದೇವೆ. ಜೋಶಿಯವರಿಗೆ ಹತ್ತು ವರ್ಷ ಅಧಿಕಾರ ಕೊಟ್ಟಿದ್ದಾರೆ. ಒಂದು ಕಠಿಣ ಕಾನೂನು ತೆಗೆದುಕೊಂಡು ಬನ್ನಿ ಎಂದು ಒತ್ತಾಯಿಸಿದರು.

ಕೊಲೆ ಮಾಡುವ ಉದ್ದೇಶದಿಂದಲೇ ಫಯಾಜ್ ಕಾಲೇಜಿಗೆ ಬಂದಿದ್ದಾನೆ. ಆದರೆ ಆತನ ತಾಯಿ ಅವಳೇ ಹಿಂದೆ ಬಂದಿದ್ದಳು ಎನ್ನುತ್ತಾರೆ. ಅವನೇನು ಸಲ್ಮಾನ್ ಖಾನ್ ನಾ. ಅವರ ತಂದೆ-ತಾಯಿಗೆ ಸಾಮಾನ್ಯಜ್ಞಾನ ಇದ್ದರೆ ಮದುವೆ ಮಾಡಬೇಕಿತ್ತು. ಅವರ ತಂದೆ ಅಫೇರ್ ಅಂತಾರೆ. ಶಿಕ್ಷಕರಾಗಿ ಹೇಗೆ ಮಾತಾಡುತ್ತಾರೆ. ಇವರು ಮಕ್ಕಳಿಗೆ ಏನು ಶಿಕ್ಷಣ ಕೊಡುತ್ತಾರೆ. ಶಿಕ್ಷಕರು, ಗೃಹ ಸಚಿವರು ತಪ್ಪು ಮಾಡಬಾರದು. 27 ಸೆಕೆಂಡ್ ನಲ್ಲಿ 9 ಸಲ ಚುಚ್ಚಿದ್ದಾನೆ. ಕಾಲೇಜಿಗೆ ಸೆಕ್ಯುರಿಟಿ ಇಲ್ಲ ಆದರೆ ಹತ್ಯೆ ಮಾಡಿದ ಆರೋಪಿ ಫಯಾಜ್ ಮನೆಗೆ ಸೆಕ್ಯುರಿಟಿ ಇದೆ ಎಂದು ಪ್ರಥಮ್ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next