Advertisement

Adivasi: ಆದಿವಾಸಿ ಮಹಾಭಿಯಾನಕ್ಕೆ ಚಾಲನೆ- ಪ್ರಧಾನಿ ಮೋದಿ ಘೋಷಣೆ

12:10 AM Nov 16, 2023 | Team Udayavani |

ಕುಂತಿ: ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜಯಂತಿಯ ಅಂಗವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗಾಗಿ 24,000 ಕೋಟಿ ರೂ. ಮೊತ್ತದ “ಪಿಎಂ ಜನಜಾತಿ ಆದಿವಾಸಿ ಮಹಾ ಅಭಿಯಾನ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

Advertisement

ಬಿರ್ಸಾ ಮುಂಡಾ ಅವರ ಜನ್ಮಸ್ಥಳ ಝಾರ್ಖಂಡ್‌ನ‌ ಉಲಿಹಾತುಗೆ ಭೇಟಿ ನೀಡಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿದ ಅನಂತರ ಕುಂತಿ ಫ‌ುಟ್‌ಬಾಲ್‌ ಮೈದಾನದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ “ವಿಕಸಿತ್‌ ಭಾರತ್‌ ಸಂಕಲ್ಪ ಯಾತ್ರೆ’ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.

“ವಿಕಸಿತ್‌ ಭಾರತ್‌ ಸಂಕಲ್ಪ ಯಾತ್ರೆ’ಯು ರಾಷ್ಟ್ರವ್ಯಾಪಿ ಯೋಜನೆಯಾಗಿದ್ದು, ಕೇಂದ್ರ ಸರಕಾರದ ವಿವಿಧ ಯೋಜನೆಗಳಿಗೆ ಅರ್ಹರಾಗಿದ್ದರೂ ಇದುವರೆಗೆ ಪ್ರಯೋಜನ ಪಡೆಯದ ನಾಗರಿಕರನ್ನು ತಲುಪುವ ಗುರಿಯನ್ನು ಈ ಯೋಜನೆ ಹೊಂದಿದೆ. “ರಾಷ್ಟ್ರದ ಅಭಿವೃದ್ಧಿಗೆ ಮಹಿಳೆ, ರೈತರು, ಯುವಕರು ಹಾಗೂ ಮಧ್ಯಮ ವರ್ಗ ಮತ್ತು ಬಡವರನ್ನು ಸಶಕ್ತಗೊಳಿಸುವುದು ಅಗತ್ಯ’ ಎಂದು ಹೇಳಿದ ಪ್ರಧಾನಿ ಮೋದಿ, “ಸೌಲಭ್ಯ ವಂಚಿತರಿಗೆ ಸಲ್ಲಿಸಬೇಕಾದ ಋಣವನ್ನು ತೀರಿಸಲು ಮಹಾನ್‌ ನಾಯಕ ಬಿರ್ಸಾ ಮುಂಡಾ ಅವರ ಜನ್ಮಸ್ಥಳಕ್ಕೆ ಬಂದಿದ್ದೇನೆ’ ಎಂದರು.

“ದೇಶದ ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಹೋಗಲಾಡಿಸಿದಾಗ ಮಾತ್ರ ನಿಜವಾದ ಜಾತ್ಯಾತೀತತೆ ಸಾಧ್ಯ. ಸರಕಾರದ ಎಲ್ಲ ಯೋಜನೆಯ ಸೌಲಭ್ಯಗಳು ಒಂದೇ ಪ್ರಮಾಣದಲ್ಲಿ ಎಲ್ಲರಿಗೂ ತಲುಪಿದಾಗ ಮಾತ್ರ ಸಾಮಾಜಿಕ ನ್ಯಾಯ ಖಾತ್ರಿಯಾಗುತ್ತದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next